ಇದಕ್ಕೂ ಮುನ್ನ ಕೊಡಿಗೆಹಳ್ಳಿಯ ಗುಂಡಾಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಅವರು, ತಮ್ಮ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಬ್ಯಾಟರಾಯನಪುರದಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿದರು. ಭಾರಿ ಸಂಖ್ಯೆಯ ಕಾರ್ಯಕರ್ತರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಈ ಸಂದರ್ಭದಲ್ಲಿ ಬ್ಯಾಟರಾಯನಪುರ ಸಿಗ್ನಲ್ ಬಳಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿ, ವಾಹನ ಸವಾರರು ಪರದಾಡಬೇಕಾಯಿತು. ಭದ್ರತೆಗಾಗಿ ನಾಗಾಲ್ಯಾಂಡ್ ಸಶಸ್ತ್ರ ಪೊಲೀಸ್ ತುಕಡಿಯ 28, ಸಿಆರ್ಪಿಎಫ್ನ 20 ಪೊಲೀಸರು, ಮೂವರು ಇನ್ಸ್ಪೆಕ್ಟರ್, ನಾಲ್ಕು ಮಂದಿ ಸಬ್ಇನ್ಸ್ಪೆಕ್ಟರ್ ಒಳಗೊಂಡಂತೆ 15 ಜನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಉಳಿದಂತೆ ಮಂಜುನಾಥ್ (ಕೆಜೆಪಿ), ವಿನಾಯಕ ಸುಬ್ರಮಣಿ(ಬಿಎಸ್ಆರ್ಕಾಂಗ್ರೆಸ್), ಸುರೇಶ್(ಬಿಎಸ್ಪಿ), ಮಜೀರ್ ಪಾಷ(ಅಂಬೇಡ್ಕರ್ ನ್ಯಾಷನಲ್ ಕಾಂಗ್ರೆಸ್ ಪಕ್ಷ), ಶಾಂತಕುಮಾರಿ (ಮಹಿಳಾ ಪ್ರಧಾನ ಪಕ್ಷ), ಯೋಗಯ್ಯ (ಲೋಕಸತ್ತಾ ಪಕ್ಷ) ಹಾಗೂ 7 ಜನ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.