`ಅಕ್ರಮ ಗಣಿಗಾರಿಕೆ, ಅದನ್ನು ತಡೆಯುವ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಕುರಿತು ವರದಿಯಲ್ಲಿ ತಿಳಿಸಲಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ, ಧರ್ಮಸಿಂಗ್, ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರೂ ಸೇರಿದ್ದಾರೆ. ಇವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಬೇಕಿದೆ~ ಎಂದು ಅವರು ಹೇಳಿದರು.
`ಲೋಕಾಯುಕ್ತರ ನೇಮಕವಾಗಬೇಕು. ರಾಜ್ಯದಲ್ಲಿ ಸೂಕ್ತ ವ್ಯಕ್ತಿ ಸಿಗದಿದ್ದರೆ ಹೊರ ರಾಜ್ಯದವರನ್ನಾದರೂ ಶೀಘ್ರ ನೇಮಕ ಮಾಡಬೇಕು. ಆದರೆ ತಮ್ಮ ರಾಜಕೀಯ ಹಿತಾಸಕ್ತಿ ಕಾಪಾಡುವ ಅಭ್ಯರ್ಥಿಗಾಗಿ ಶೋಧ ನಡೆದಿರುವುದರಿಂದ ವಿಳಂಬವಾಗುತ್ತಿದೆ~ ಎಂದು ಅವರು ಟೀಕಿಸಿದರು.