ಜೆ.ಪಿ.ನಗರ 3ನೇ ಹಂತದಲ್ಲಿರುವ ಶ್ರೀ ಸತ್ಯಸಾಯಿಬಾಬಾ ದೇವಸ್ಥಾನದ ಹತ್ತಿರ ಫುಟ್ಪಾತಿನಲ್ಲಿ ನಂದಿನಿ ಹಾಲಿನ ಕೇಂದ್ರವಿದ್ದು, ಈ ಹಾಲಿನ ಕೇಂದ್ರದವರು ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಈ ಕುರಿತು ವಿಚಾರಿಸಿದರೆ ನಮಗೆ ವ್ಯಾಪಾರ ಗಿಟ್ಟುವುದಿಲ್ಲ ಎಂದು ದಬಾಯಿಸುತ್ತಾರೆ ಮತ್ತು ಸರಿಯಾದ ಸಮಯಕ್ಕೆ ಹಾಲಿನ ಸರಬರಾಜು ನಡೆಯುತ್ತಿಲ್ಲ. ಇದರಿಂದ ಗ್ರಾಹಕರು ಪ್ರತಿನಿತ್ಯ ತೊಂದರೆ ಎದುರಿಸಬೇಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಡೈರಿ ನಿರ್ದೇಶಕರು ಮತ್ತು ವ್ಯವಸ್ಥಾಪಕರು ಸೂಕ್ತ ಕ್ರಮಕೈಗೊಳ್ಳಬೇಕು.