ಶಿವಮೊಗ್ಗ: ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯ ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುಳಿತಿದ್ದು ಎಲ್ಲರ ಹುಬ್ಬೇರಿಸಿತು.
ಸದಾನಂದಗೌಡ ಅವರು ಮಾತನಾಡಿ ಮುಗಿಸುವವರೆಗೂ ಸುಮ್ಮನೆ ಕುಳಿತಿದ್ದ ಯಡಿಯೂರಪ್ಪ, ಕೊನೆಯಲ್ಲಿ, ತಾವು ಜಿಲ್ಲೆಗೆ ನೀಡಿದ ವಿಶೇಷ ಅನುದಾನಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು; ಹಾಗೆಯೇ, ಜಿಲ್ಲೆಗೆ ಬಜೆಟ್ನಲ್ಲಿ ಘೋಷಿಸಿದ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಕೈಗೆತ್ತಿಕೊಳ್ಳಬೇಕು ಎಂದು ಸಲಹೆ ರೂಪದ ಸೂಚನೆ ನೀಡಿದರು.
ಸಭೆಯ ಮಧ್ಯೆ ಗಾಂಧಿ ಪಾರ್ಕ್ಗೆ ಬಾಕಿ ್ಙ ಐದು ಕೋಟಿ ನೀಡುವಂತೆ ಹೇಳಿದಾಗ, ಅದಕ್ಕೆ ಪ್ರತಿಕ್ರಿಯಿಸಿದ ಸದಾನಂದಗೌಡ, `ಯಡಿಯೂರಪ್ಪ ಅವರು ಆದೇಶ ಮಾಡಿದ್ದಾರೆ; ಅದರಂತೆ ್ಙ ಐದು ಕೋಟಿ ತಕ್ಷಣ ಬಿಡುಗಡೆ ಮಾಡಲಾಗುವುದು~ ಎಂದರು.