ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಮೀರ್ ಸ್ಫೋಟದ ರೂವಾರಿ ಕೊಲೆ: ಮೂವರ ಬಂಧನ

Last Updated 19 ಡಿಸೆಂಬರ್ 2010, 12:40 IST
ಅಕ್ಷರ ಗಾತ್ರ

ದಿವಾಸ್, ಮಧ್ಯಪ್ರದೇಶ (ಪಿಟಿಐ): ಅಜ್ಮೀರ್ ಸ್ಫೋಟ ಪ್ರಕರಣ ಸಂಚು ರೂಪಿಸಿದ ಹಾಗೂ ಆರ್‌ಎಸ್‌ಎಸ್ ಕಚೇರಿಯ ಸಹಾಯಕ ಸುನೀಲ್ ಜೋಷಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಷದ್ ಸೋಲಂಕಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಈಗಾಗಲೇ ಅಜ್ಮೀರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಲಂಕಿ ರಾಜಸ್ತಾನ ಎಟಿಎಸ್ ವಶದಲ್ಲಿದ್ದಾರೆ. ದಿವಾಸ್‌ನಲ್ಲಿ ವಾಸುದೇವ್ ಪಾರ್‌ಮರ್ ಮತ್ತು ಇಂದೋರ್‌ನ ಅನಂದ್ ರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕೋರ್ಟ್‌ಗೆ ಹಾಜುರುಪಡಿಸಿದ್ದು ಸೋಲಂಕಿ ಅವರನ್ನು ಡಿ. 30ರವರೆಗೆ ನ್ಯಾಯಾಂಗ ಬಂಧನಕ್ಕೆ, ಉಳಿದ ಇಬ್ಬರು ಆರೋಪಿಗಳ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT