ಬೆಂಗಳೂರು: ಬಿಜೆಪಿ ಪಕ್ಷದ ಕಾರ್ಯಕರ್ತರು ನಿರಂತರವಾಗಿ ಸ್ತ್ರೀವಿರೋಧಿ ಕೃತ್ಯ ಮಾಡುತ್ತಿರುವುದರಿಂದ ಸರ್ಕಾರಕ್ಕೆ ದೋಷ ಅಂಟಿಕೊಂಡಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರು ಶನಿವಾರ ನಗರದ ಆನಂದ್ ರಾವ್ ವೃತ್ತ ಸಮೀಪದ ಗಾಂಧಿ ಪ್ರತಿಮೆ ಬಳಿ ಸಚಿವರು ಹೋಮ ಮಾಡಿಸುತ್ತಿರುವಂತೆ ಅಣುಕು ಪ್ರದರ್ಶನ ಮಾಡಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪ್ರಸ್ತುತ ದಿನದವರೆಗೂ ಮಹಿಳೆಯರ ಮೇಲೆ ಅತ್ಯಚಾರ, ಕೊಲೆ, ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಸೇರಿದಂತೆ ಮಹಿಳಾ ವಿರೋಧಿ ನೀತಿಯನ್ನು ತಾಳಿದೆ. ಇದರಿಂದ ಪಕ್ಷಕ್ಕೆ ಈಗ ದೋಷ ಅಂಟಿಕೊಂಡಿದೆ ಎಂದರು.