ಅಣ್ಣಾ ಹಜಾರೆ ಅವರು ಭ್ರಷ್ಟಾಚಾರ ನಿರ್ಮೂಲನೆಗಾಗಿ ಉಪವಾಸ ಕೂರುವುದನ್ನು ಬಿಟ್ಟು ದೇಶದ ಉದ್ದಗಲದಲ್ಲಿ ಪ್ರವಾಸ ಮಾಡಿ ಭ್ರಷ್ಟಾಚಾರ ವಿರುದ್ಧ ಯುವ ಜನರನ್ನು ಜಾಗೃತಗೊಳಿಸುವ ಕೆಲಸದಲ್ಲಿ ತೊಡಗಬೇಕು ಎಂದು ನನ್ನ ಮನವಿ.
ಜನ ಲೋಕಪಾಲ ವ್ಯವಸ್ಥೆ ಜಾರಿಗೆ ಬರದಂತೆ ತಡೆಯುವ ಹುನ್ನಾರವನ್ನು ಎಲ್ಲ ರಾಜಕೀಯ ಪಕ್ಷಗಳೂ ಮಾಡುತ್ತಿವೆ. ಈ ಸಂದರ್ಭದಲ್ಲಿ ಜನರಲ್ಲಿ ಜಾಗೃತಿ ಮೂಲಕವೇ ಭ್ರಷ್ಟಾಚಾರದ ವಿರುದ್ಧ ಪ್ರಬಲ ಜನಾಭಿಪ್ರಾಯ ಮೂಡಿಸುವ ಅಗತ್ಯವಿದೆ. ಅಣ್ಣಾ ಈ ಬಗ್ಗೆ ಯೋಚಿಸಲಿ.