ನವದೆಹಲಿ (ಐಎಎನ್ಎಸ್): ಉತ್ತರ ಪ್ರದೇಶದ ಚುನಾವಣೆಯಲ್ಲಿ ಜನ ಲೋಕಪಾಲ ಮಸೂದೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಅಣ್ಣಾ ತಂಡ ರಾಜ್ಯದಲ್ಲಿ ಗುರುವಾರ ಪ್ರವಾಸ ಆರಂಭಿಸಲಿದೆ.
ಲೋಕಪಾಲ ಮಸೂದೆ ಬಗ್ಗೆ ರಾಜಕೀಯ ಪಕ್ಷಗಳ ನಿಲುವುಗಳನ್ನು ತಂಡ ಮತದಾರರಿಗೆ ತಿಳಿಸಲಿದೆ. ಬಾರಾಬಂಕಿ ಮತ್ತು ಗೋಂಡಾದಲ್ಲಿ ಗುರುವಾರ, ಫೈಜಾಬಾದ್ ಮತ್ತು ಬಸ್ತಿಯಲ್ಲಿ ಶುಕ್ರವಾರ ಸಾರ್ವಜನಿಕ ರ್ಯಾಲಿ ನಡೆಸಲಾಗುವುದು ಎಂದು ತಂಡದ ಪ್ರಕಟಣೆ ತಿಳಿಸಿದೆ.