ರಾಜರಾಜೇಶ್ವರಿನಗರ: ಸಾಮಾಜಿಕ ಕಾರ್ಯಕರ್ತ ಅಣ್ಣಾಹಜಾರೆ ಅವರು ದೆಹಲಿ ರಾಜಘಾಟ್ನಲ್ಲಿ ಕೈಗೊಂಡಿರುವ ಧರಣಿ ಬೆಂಬಲಿಸಿ ಕರ್ನಾಟಕ ಭ್ರಷ್ಟಾಚಾರ ವೇದಿಕೆ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿ ಸಾಂಕೇತಿಕ ಧರಣಿ ನಡೆಸಿದರು.
ರಾಜರಾಜೇಶ್ವರಿನಗರ ಪ್ರದೇಶದ್ವಾರದ ಬಳಿ ಧರಣಿ ನಡೆಸಿ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದರು.ಲೋಕಪಾಲ ಮಸೂದೆ ಕರಡುನಲ್ಲಿರುವ ಎಲ್ಲ ಅಂಶಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿದರು.ವೇದಿಕೆ ಅಧ್ಯಕ್ಷ ಕೆ.ಟಿ.ಪ್ರಕಾಶ್, ಉಪಾಧ್ಯಕ್ಷ ಎಂ.ಪಿ.ಪದ್ಮನಾಭ ಮುಂತಾದವರು ಮಾತನಾಡಿದರು.