ಕಠ್ಮಂಡು (ಐಎಎನ್ಎಸ್): ಅಣ್ಣಾ ಹಜಾರೆ ಅವರ ಚಳವಳಿಯಿಂದ ಪ್ರೇರಣೆ ಪಡೆದಿರುವ ಇಲ್ಲಿನ ಐಟಿಸಿ ಜಂಟಿ ಸಹಭಾಗಿತ್ವದ ಜವಳಿ ಉದ್ದಿಮೆ ಕಾರ್ಮಿಕರು ಕಾರ್ಖಾನೆಯ ಪುನರಾರಂಭಕ್ಕಾಗಿ ಅಣ್ಣಾ ಅವರ ಉಪವಾಸ ಸತ್ಯಾಗ್ರಹದ ಮಾರ್ಗವನ್ನು ತುಳಿದಿದ್ದಾರೆ.
ಉದ್ದಿಮೆಯಲ್ಲಿ ಬಹುತೇಕ ಮಹಿಳಾ ಕಾರ್ಮಿಕರೇ ಇದ್ದು, ಮೊರಾಂಗ್ ಜಿಲ್ಲೆಯಲ್ಲಿರುವ ಸೂರ್ಯ ನೇಪಾಳ ಜವಳಿ ಕಾರ್ಖಾನೆ ಎದುರು ಸೋಮವಾರ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಮಾವೋವಾದಿಗಳ ದಾಳಿಯ ನಂತರ ಕಳೆದ ತಿಂಗಳು ಉದ್ದಿಮೆಯನ್ನು ಮುಚ್ಚಲಾಗಿತ್ತು.