<p>ಹೆಸರು ಕಿಶನ ಹಜಾರೆ<br /> ತಂದೆ ಬಾಬುರಾವ ಹಜಾರೆ<br /> ಊರು ಮಹಾರಾಷ್ಟ್ರದ ಭಿಂಗಾರ<br /> ಅನ್ನದ ನೆಲೆ ರಾಳೇಗಣ ಸಿದ್ಧಿ</p>.<p>ಸೇನೆಗೆ ಸೇರಿ ಟ್ರಕ್ ಚಾಲಕನಾಗಿ<br /> ದೇಶದ ಸೇವೆಗೆ ಮನಮುಡಿಪಾಗಿ<br /> ಯುದ್ಧದಿ ಸಾವಿನ ಚಿತ್ರವ ಕಂಡು<br /> ಹೊಂದಿದರು ಸ್ವಯಂನಿವೃತ್ತಿ</p>.<p>ರಾಳೇಗಣ ಸಿದ್ಧಿಗೆ ಮರಳಿ ಬಂದು<br /> ಜನತಾ ಜನಾರ್ದನರ ಸೇವೆಗೆ ನಿಂದು<br /> ಗ್ರಾಮವೇ ದೇಗುಲ ಮಾಡಿಕೊಂಡು <br /> ಜನಸೇವೆಗೆ ತಾ ಎಂದೂ ಮುಂದು</p>.<p>ಗಾಂಧಿಮಾರ್ಗ ಸ್ವಾವಲಂಬನೆ ಮಂತ್ರ<br /> ಜಲಮೂಲಗಳ ಪುನಶ್ಚೇತನಗೊಳಿಸಿ<br /> ರೈತರ ಮುಖದಿ ಗೆಲುವನು ಕಂಡು<br /> ಸಂತಸ ನೂರ್ಮಡಿ ಹೊಂದಿದರು</p>.<p>ಜೈವಿಕ ಅನಿಲ ಬಳಸಲು ಹೇಳಿ<br /> ಹೈನುಗಾರಿಕೆಗೆ ಒತ್ತನು ನೀಡಿ<br /> ಸಾಕ್ಷರತೆಯ ಪಡೆಯಲು ನುಡಿದು<br /> ಸಹಕಾರಿ ಸಂಘವ ಮಾಡಿದರು</p>.<p>ಕುಗ್ರಾಮದಿಂದಲೇ ಗಮನವ ಸೆಳೆದು<br /> ಕಿಸನ ಹಜಾರೆಯು ಅಣ್ಣನು ಆಗಿ<br /> ಮಾಡಿದ ಸಾಧನೆಗೆ ಮನ್ನಣೆ ಪಡೆದು<br /> ರಾಷ್ಟ್ರದಿ ಲಕಲಕ ಮಿಂಚಿದರು</p>.<p>ಭ್ರಷ್ಟಾಚಾರ ವಿರೋಧಿ ಚಳವಳಿ<br /> ರೂಪಿಸಿ ಜನಮನ ಮಾನಸದಿ<br /> ಮಾಹಿತಿ ಹಕ್ಕು ಕಾಯ್ದೆಯ ಹೇಳಿ<br /> ಕೋಟ್ಯಂತರ ಜನಗಳ ತಲುಪಿದರು</p>.<p>ನೈತಿಕ ಆಶಾವಾದವ ಮೂಡಿಸಿ<br /> ನಿರಶನದಿಂದ ನಿರೀಕ್ಷೆಯ ಹುಟ್ಟಿಸಿ<br /> ಹೊಸ ಬದಲಾವಣೆಗೆ ದನಿಯನು ನೀಡಿ<br /> ಜೀವಂತ ಸಾಕ್ಷಿಯು ಎನಿಸಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಹೆಸರು ಕಿಶನ ಹಜಾರೆ<br /> ತಂದೆ ಬಾಬುರಾವ ಹಜಾರೆ<br /> ಊರು ಮಹಾರಾಷ್ಟ್ರದ ಭಿಂಗಾರ<br /> ಅನ್ನದ ನೆಲೆ ರಾಳೇಗಣ ಸಿದ್ಧಿ</p>.<p>ಸೇನೆಗೆ ಸೇರಿ ಟ್ರಕ್ ಚಾಲಕನಾಗಿ<br /> ದೇಶದ ಸೇವೆಗೆ ಮನಮುಡಿಪಾಗಿ<br /> ಯುದ್ಧದಿ ಸಾವಿನ ಚಿತ್ರವ ಕಂಡು<br /> ಹೊಂದಿದರು ಸ್ವಯಂನಿವೃತ್ತಿ</p>.<p>ರಾಳೇಗಣ ಸಿದ್ಧಿಗೆ ಮರಳಿ ಬಂದು<br /> ಜನತಾ ಜನಾರ್ದನರ ಸೇವೆಗೆ ನಿಂದು<br /> ಗ್ರಾಮವೇ ದೇಗುಲ ಮಾಡಿಕೊಂಡು <br /> ಜನಸೇವೆಗೆ ತಾ ಎಂದೂ ಮುಂದು</p>.<p>ಗಾಂಧಿಮಾರ್ಗ ಸ್ವಾವಲಂಬನೆ ಮಂತ್ರ<br /> ಜಲಮೂಲಗಳ ಪುನಶ್ಚೇತನಗೊಳಿಸಿ<br /> ರೈತರ ಮುಖದಿ ಗೆಲುವನು ಕಂಡು<br /> ಸಂತಸ ನೂರ್ಮಡಿ ಹೊಂದಿದರು</p>.<p>ಜೈವಿಕ ಅನಿಲ ಬಳಸಲು ಹೇಳಿ<br /> ಹೈನುಗಾರಿಕೆಗೆ ಒತ್ತನು ನೀಡಿ<br /> ಸಾಕ್ಷರತೆಯ ಪಡೆಯಲು ನುಡಿದು<br /> ಸಹಕಾರಿ ಸಂಘವ ಮಾಡಿದರು</p>.<p>ಕುಗ್ರಾಮದಿಂದಲೇ ಗಮನವ ಸೆಳೆದು<br /> ಕಿಸನ ಹಜಾರೆಯು ಅಣ್ಣನು ಆಗಿ<br /> ಮಾಡಿದ ಸಾಧನೆಗೆ ಮನ್ನಣೆ ಪಡೆದು<br /> ರಾಷ್ಟ್ರದಿ ಲಕಲಕ ಮಿಂಚಿದರು</p>.<p>ಭ್ರಷ್ಟಾಚಾರ ವಿರೋಧಿ ಚಳವಳಿ<br /> ರೂಪಿಸಿ ಜನಮನ ಮಾನಸದಿ<br /> ಮಾಹಿತಿ ಹಕ್ಕು ಕಾಯ್ದೆಯ ಹೇಳಿ<br /> ಕೋಟ್ಯಂತರ ಜನಗಳ ತಲುಪಿದರು</p>.<p>ನೈತಿಕ ಆಶಾವಾದವ ಮೂಡಿಸಿ<br /> ನಿರಶನದಿಂದ ನಿರೀಕ್ಷೆಯ ಹುಟ್ಟಿಸಿ<br /> ಹೊಸ ಬದಲಾವಣೆಗೆ ದನಿಯನು ನೀಡಿ<br /> ಜೀವಂತ ಸಾಕ್ಷಿಯು ಎನಿಸಿದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>