ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲವು ನ್ಯೂನತೆಗಳಿದ್ದರೂ, ಅಂತಃಸಾಕ್ಷಿಯುಳ್ಳ ಹಾಗೂ ಧೀಮಂತ ರಾಜಕೀಯ ನಾಯಕರು ಈಗಲೂ ಇದ್ದಾರೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.ಹಜಾರೆ ಅವರ ಚಳವಳಿಯಲ್ಲಿ ಭಾಗಿಯಾದ ಯೋಗಗುರು ರಾಮ್ದೇವ್ ಅವರನ್ನು ಕೊಂಡಾಡಿರುವ ಅಡ್ವಾಣಿ, ರಾಷ್ಟ್ರದ ಆರ್ಥಿಕ ವ್ಯವಸ್ಥೆಗೆ ಮಾರಕವಾಗಿರುವ ಕಪ್ಪುಹಣ ದಂಧೆ ಹಾಗೂ ಚುನಾವಣೆಯಲ್ಲಿ ಹಣಬಲದ ಮೇಲಾಟ ತಡೆಯುವ ಬಗ್ಗೆ ಚರ್ಚಿಸಲು ರಾಜಕೀಯ ಪಕ್ಷಗಳ ಸಭೆಯೊಂದನ್ನು ಕರೆಯಬೇಕೆಂದು ಅವರು ಸಲಹೆ ನೀಡಿದ್ದಾರೆ.ಕಾಂಗ್ರೆಸ್ ಹಿರಿಯ ನಾಯಕ ಪ್ರಣವ್ ಮುಖರ್ಜಿ ಅವರು ಏ.8ರ ಸಂಜೆ ತಮ್ಮನ್ನು ಭೇಟಿಯಾಗಿ, ಉದ್ದೇಶಿತ ಲೋಕಪಾಲ ಮಸೂದೆಯ ಕುರಿತು ಚರ್ಚಿಸಿದರು ಎಂದೂ ತಿಳಿಸಿದ್ದಾರೆ.