ನವದೆಹಲಿ, (ಪಿಟಿಐ): ಅಣ್ಣಾ ಹಜಾರೆ ತಂಡವು ಜನ ಲೋಕಪಾಲ ಮಸೂದೆಗೆ ಸಂಬಂಧಿಸಿದ ಜನಮತಗಣನೆ ಆಂದೋಲನವನ್ನು ಉತ್ತರ ಪ್ರದೇಶದಲ್ಲಿ ಭಾನುವಾರ ಆರಂಭಿಸಲಿದೆ.
ಬಿಜೆಪಿ ಮುಖಂಡ ರಾಜನಾಥ್ ಸಿಂಗ್ ಪ್ರತಿನಿಧಿಸುವ ಗಾಜಿಯಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಆರಂಭವಾಗುವ ಆಂದೋಲನವು ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ ಪ್ರತಿನಿಧಿಸುವ ರಾಯ್ಬರೇಲಿ, ಅಮೇಥಿ ಕ್ಷೇತ್ರಗಳಲ್ಲೂ ನಡೆಯಲಿದೆ. ನಂತರ ದೇಶದಾದ್ಯಂತ ಈ ಪ್ರಕ್ರಿಯೆ ನಡೆಯಲಿದೆ.
ಜೈಪುರ, (ಪಿಟಿಐ): ರಾಜಸ್ತಾನದ ಸಚಿವ ಭರೊಸಿಲಾಲ್ ಜಾಟವಾ, ಅವರ ಪುತ್ರ ಮತ್ತು ಇತರ 11 ಜನರ ವಿರುದ್ಧ ಅಕ್ರಮ ಗಣಿ ಸಂಬಂಧ ಎಫ್ಐಆರ್ ದಾಖಲಿಸಲು ಕೋರ್ಟ್ ಆದೇಶಿಸಿದೆ.