ಬೆಂಗಳೂರು: ರಾಜ್ಯ ಸರ್ಕಾರ ಐವರು ಕೆಎಎಸ್ ಮತ್ತು ಒಬ್ಬರು ಐಎಫ್ಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿ ಮಂಗಳವಾರ ಆದೇಶ ಹೊರಡಿಸಿದೆ.
ಕೆ.ಎ.ಎಸ್ ಅಧಿಕಾರಿಗಳು: ಆರ್.ಆರ್.ಜನ್ನು- ಪ್ರಧಾನ ವ್ಯವಸ್ಥಾಪಕರು (ಆಡಳಿತ), ಕೆಯುಐಡಿಎಫ್ಸಿ, ಬೆಂಗಳೂರು. ಡಾ.ಸಿ.ನಾಗಯ್ಯ- ಆಯುಕ್ತರು, ಗುಲ್ಬರ್ಗ ಮಹಾನಗರ ಪಾಲಿಕೆ. ಬಿ.ಎಸ್.ಪುರುಷೋತ್ತಮ- ಉಪ ಕಾರ್ಯದರ್ಶಿ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ, ಚಿತ್ರದುರ್ಗ. ಎಚ್.ಎಸ್.ರಾಮಕೃಷ್ಣ- ಸಹಾಯಕ ರಾಜ್ಯ ಪ್ರತಿನಿಧಿ, ಕರ್ನಾಟಕ ಮೇಲ್ಮನವಿ ನ್ಯಾಯ ಮಂಡಳಿ (ಕೆಎಟಿ), ಕೆ.ಬಿ.ಚಿಕ್ಕಬೆಟ್ಟಯ್ಯ- ಬಾಡಿಗೆ ನಿಯಂತ್ರಣಾಧಿಕಾರಿ,
ಬೆಂಗಳೂರು ಉತ್ತರ. ಐಎಫ್ಎಸ್ ಅಧಿಕಾರಿ ಎನ್.ಎಲ್.ಶಾಂತಕುಮಾರ್ ಅವರನ್ನು ಶಿರಸಿಯ ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಯಾಗಿ ವರ್ಗ ಮಾಡಲಾಗಿದೆ.