ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ವಿರುದ್ಧ ಕ್ರಮ: ಜಿ.ಪಂ ಅಧ್ಯಕ್ಷ

Last Updated 14 ಡಿಸೆಂಬರ್ 2013, 7:55 IST
ಅಕ್ಷರ ಗಾತ್ರ

ಗುಡಿಬಂಡೆ: ತಾಲ್ಲೂಕಿನ ಸೋಮೇನ­ಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಕಡತಗಳ ಕೋಣೆಗೆ ಬೆಂಕಿ ಹಚ್ಚಿ ಸುಟ್ಟಿ­ರುವ ಘಟನೆಯಲ್ಲಿ ಭಾಗಿಯಾದ ಅಧಿ­ಕಾರಿ­­ಗಳನ್ನು ಅಮಾನತು ಮಾಡು­ವಂತೆ ಒತ್ತಾಯಿಸಿ ತಾಲ್ಲೂಕಿನ ಸಿಪಿಐಎಂ ಹಾಗೂ ರೈತಪರ ಸಂಘಟನೆ ಕಾರ್ಯ­ಕರ್ತರು ಶುಕ್ರವಾರವೂ ಧರಣಿ ನಡೆಸಿದರು.

ವಿಷಯ ತಿಳಿದ ಜಿಲ್ಲಾ ಪಂಚಾಯತಿ ಅಧ್ಯಕ್ಷ ಚಿನ್ನಪ್ಪಯ್ಯ ತಾಲ್ಲೂಕು ಪಂಚಾ­ಯತಿ ಕಚೇರಿಗೆ ಶುಕ್ರವಾರ ಭೇಟಿ ನೀಡಿ, ಸೋಮೇನಹಳ್ಳಿ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ 13ನೇ ಹಣಕಾಸು ಹಾಗೂ ವಿವಿಧ ಯೋಜನೆಗಳ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿದರು. ಸರಿ­ಯಾದ ದಾಖಲೆ  ನೀಡದೆ ಮಾತಿಗಿಳಿದ ಕಾರ್ಯನಿರ್ವಹಣಾಧಿಕಾರಿ ಆರ್.­ಇಂದ್ರೇಶ್ ಹಾಗೂ ಲೆಕ್ಕಪರಿಶೋಧಕ ತಿಪ್ಪೇಸ್ವಾಮಿಯನ್ನು ತರಾಟೆಗೆ ತೆಗೆದು­ಕೊಂಡರು.

ಡಿ.16 ರಂದು ಚಿಕ್ಕಬಳ್ಳಾಪುರ ಜಿಲ್ಲಾಪಂಚಾಯತಿಯಲ್ಲಿ ನಡೆಯುವ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸೋಮೇನ­ಹಳ್ಳಿ ಗ್ರಾಮಪಂಚಾಯಿತಿಗೆ ಸಂಬಂಧಿಸಿದ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಆದೇಶಿಸಿ­ದರು. ಒಂದು ವೇಳೆ ವರದಿ ನೀಡುವಲ್ಲಿ ವಿಫಲರಾದರೆ ಕಾರ್ಯ­ನಿರ್ವಹಣಾ­ಧಿಕಾರಿ ಆರ್.ಇಂದ್ರೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಸಿದರು.

ಸೋಮೇನಹಳ್ಳಿ ಗ್ರಾಮ ಪಂಚಾಯತಿ­ಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಕಾರ್ಯದರ್ಶಿ ಮದ್ದರೆಡ್ಡಿಯನ್ನು ಅಮಾ­ನತು ಮಾಡುವುದಾಗಿ ಭರವಸೆ ನೀಡಿದ ಬಳಿಕ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಸಿಐಟಿಯು ಕಾರ್ಯಕರ್ತರು ಧರಣಿ ಹಿಂಪಡೆದರು. ಸೋಮೇನಹಳ್ಳಿ ಗ್ರಾ.ಪಂ ಕಡತಗಳಿಗೆ ಬೆಂಕಿ ಇಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮಂಗಳವಾರ ಉಗ್ರ ಹೋರಾಟ ನಡೆಸು­ವುದಾಗಿ ಕಾರ್ಯಕರ್ತರು ಇದೇ ವೇಳೆ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ತಾಲ್ಲೂಕು ಪಂಚಾ­ಯತಿ ಉಪಾಧ್ಯಕ್ಷ ಆದಿನಾರಾಯಣ­ರೆಡ್ಡಿ, ಸದಸ್ಯರಾದ ಮುನಿರೆಡ್ಡಿ, ಮಂಜುಳ, ಮದ್ದರೆಡ್ಡಿ ನಾಗರತ್ನ, ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಜಯರಾಮ­ರೆಡ್ಡಿ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಹೆಚ್.ಪಿ ಲಕ್ಷ್ಮಿ­ನಾರಾಯಣ, ಸೋಮೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು, ದಲಿತ ಹಕ್ಕುಗಳ ಹೋರಾಟ ಸಮಿತಿ ಮುಖಂಡ­ರಾದ ಅಶ್ವತ್ಥಪ್ಪ, ನರಸಿಂಹಮೂರ್ತಿ, ಕರ್ನಾ­ಟಕ ರೈತ ಸಂಘದ ಅಧ್ಯಕ್ಷ ನಾರಾ­ಯಣ­ಸ್ವಾಮಿ, ಕಾರ್ಯದರ್ಶಿ ವರದರಾಜು, ಅಶ್ವತ್ಥರೆಡ್ಡಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT