ಬೆಂಗಳೂರು: ರಾಜ್ಯ ವಿಧಾನಮಂಡಲದ ಅಧಿವೇಶನವನ್ನು ಇದೇ 30ರಿಂದ ಹತ್ತು ದಿನಗಳ ಕಾಲ ನಡೆಸಲು ಮಂಗಳವಾರ ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿತು.
ಈ ವಿಷಯವನ್ನು ಸಭೆ ನಂತರ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದರು. ಇದೇ 30ರಂದು ಜಂಟಿ ಅಧಿವೇಶನ ನಡೆಸುವ ಇಚ್ಛೆ ಸರ್ಕಾರಕ್ಕೆ ಇದೆ. ಆದರೆ, ಔಪಚಾರಿಕವಾಗಿ ರಾಜ್ಯಪಾಲರ ಸಮ್ಮತಿ ಬೇಕಿರುವ ಕಾರಣಕ್ಕೆ ಅವರೊಟ್ಟಿಗೆ ಚರ್ಚಿಸಿ, ದಿನಾಂಕ ನಿಗದಿ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿಗೆ ನೀಡಲು ಸಂಪುಟ ಸಭೆ ನಿರ್ಧರಿಸಿದೆ ಎಂದೂ ಅವರು ವಿವರಿಸಿದರು.