ಕಮಲಮ್ಮ ಹೊರತು ಪಡಿಸಿ ಬೇರೆ ಎಸ್.ಟಿ.ಮಹಿಳೆ ವರ್ಗಕ್ಕೆ ಸೇರಿದವರು ಈ ಎರಡೂ ಪಕ್ಷಗಳಲ್ಲಿ ಯಾರೂ ಇಲ್ಲದ ಕಾರಣ ಕಮಲಮ್ಮ ಅವರಿಗೆ ಉಪಾಧ್ಯಕ್ಷ ಹುದ್ದೆ ಒಲಿದು ಬಂತು. ಪಕ್ಷದ ಹೈಕಮಾಂಡ್ ಮಾತನ್ನು ಗಣನೆಗೆ ತೆಗೆದು ಕೊಳ್ಳದ ಜೆಡಿಎಸ್ ಸದಸ್ಯರು ತಾವೇ ನೇರವಾಗಿ ಬಿಜೆಪಿ ಯೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಆಯ್ಕೆಯ ಬಳಿಕ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಪ್ರತ್ಯೇಕವಾಗಿ ಮೆರವಣಿಗೆ ನಡೆಸಿದರು.
ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ತಾಲ್ಲೂಕು ಬಿಜೆಪಿ ಅಧ್ಯಕ್ಷ ರೇಣುಕುಮಾರ್, ಜಿ.ಪಂ. ಸದಸ್ಯರಾದ ಅಮಿತ್ಕುಮಾರ್ಶೆಟ್ಟಿ, ಎಂ.ವಿ.ಹೇಮಾವತಿ, ಇ.ಎಚ್.ಲಕ್ಷ್ಮಣ್, ಮುಖಂಡರಾದ ಜಿ.ಕೆ.ಕುಮಾರ್, ಸಂಜು, ವಿಕ್ರಂ, ಕೊರಟಿಗೆರೆ ಪ್ರಕಾಶ್, ಬಿ.ಶಿವರುದ್ರಪ್ಪ, ಕಾಂಗ್ರೆಸ್ ಮುಖಂಡರಾದ ಪುನೀತ್ಗೌಡ, ಎಂ.ಆರ್.ವೆಂಕಟೇಶ್, ತುಳಸಿ, ನಿಶಾಂತ, ಬಿ.ಎ.ಜಮಾಲುದ್ದೀನ್, ಜುಬೇರ ಅಭಿನಂದಿಸಿದರು.