`ಸಂಗ~ ಕಟ್ಟುವಾಗ ಇದ್ದವರಾರು? ಮಾಸ್ಟರ್ ಹಿರಣ್ಣಯ್ಯ ಅವರ ಪತ್ರ ಓದಿದ ಮೇಲೆ ಮನಸ್ಸಿಗೆ ತುಂಬ ನೋವಾಯಿತು.
ಈ ಪತ್ರದ ಒಕ್ಕಣೆ ಕೇವಲ ಮಾಜಿ ಮುಖ್ಯಮಂತ್ರಿಗಳಿಗೆ ಅನ್ವಯಿಸುವ ರೀತಿಯಲ್ಲಿ ತಾವು ನಿರೂಪಿಸಿದ್ದೀರಿ. `ಸಂಗ~ ಕಟ್ಟುವಾಗ ಇದ್ದ ಗಣ್ಯಮಾನ್ಯರು ಎನ್ನಿಸಿಕೊಂಡಂತಹ ಈಗಿನ ಸಂಸದರಾದ ಮಾನ್ಯ ಅನಂತಕುಮಾರ್ ಅವರ ಕೈವಾಡವೂ ಕೆಡವುದರಲ್ಲಿಯೂ ಇದೆ ಎಂಬ ಗುಮಾನಿ ನಿಮಗೆ ಬರಲಿಲ್ಲವೇ? ಈ ಅನುಮಾನ ಬಂದಿಲ್ಲದಿದ್ದರೆ ಅದು ತಮ್ಮ ಜಾತೀಯ ಅಭಿಮಾನ ಎಂದು ನಾವು ತಿಳಿಯಬಹುದೇ?
ನನ್ನದೊಂದು ಸಲಹೆ, ಈ ಪತ್ರ ಕೇವಲ ಮಾಜಿ ಮುಖ್ಯಮಂತ್ರಿಗಳಿಗಲ್ಲದೆ `ಸಂಗ~ ಕೆಡವಿದ, ಕೆಡವುತ್ತಿರುವ ಮತ್ತು ಮುಂದೆ ಕೆಡವುವ ಹಂತದಲ್ಲಿ ಪ್ರಯತ್ನಿಸುತ್ತಿರುವವರೆಲ್ಲರಿಗೂ ಅನ್ವಯಿಸುವಂತೆ ತಮ್ಮಿಂದ (ಪ್ರಶಸ್ತಿ) ಪತ್ರದ ನಿರೀಕ್ಷೆಯಲ್ಲಿ.