ಬೆಂಗಳೂರು: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕುರಿತು ಸಾಹಿತಿ ಯು.ಆರ್.ಅನಂತಮೂರ್ತಿ ನೀಡಿರುವ ಹೇಳಿಕೆಗೆ ಕಾಂಗ್ರೆಸ್ ನೈತಿಕ ಬೆಂಬಲ ನೀಡುತ್ತದೆ. ಆದರೆ, ಮೋದಿ ಕುರಿತು ಸಾರ್ವಜನಿಕ ಚರ್ಚೆ ಗಂಭೀರ ನೆಲೆಗಟ್ಟಿನಲ್ಲಿ ನಡೆಯಲಿ. ವೈಯಕ್ತಿಕ ತೇಜೋವಧೆ ಸಲ್ಲದು ಎಂದು ಪ್ರೊ. ಬಿ.ಕೆ. ಚಂದ್ರಶೇಖರ್ ನುಡಿದರು.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕೆಲವು ಮಾಧ್ಯಮಗಳು ಸಜ್ಜನರ ತೇಜೋವಧೆಗೆ ನಿರ್ಲಜ್ಜವಾಗಿ ಕಾರ್ಯಪ್ರವೃತ್ತರಾಗಿರುವುದು ಗಾಬರಿ ಹುಟ್ಟಿಸು ವಂತಿದೆ ಎಂದರು.