ಉಡುಪಿ: ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎಚ್.ಯು.ತಳವಾರ್ ಅವರ ಮಾರ್ಗದರ್ಶನದಂತೆ ನೂತನವಾಗಿ ರಚನೆಗೊಂಡಿರುವ ತನಿಖಾ ತಂಡವು ಇಲಾಖೆ ಜಂಟಿ ನಿರ್ದೇಶಕ ಎಸ್. ವಿಜಯಕುಮಾರ್ ಅವರ ನೇತೃತ್ವದಲ್ಲಿ ಮಂಗಳವಾರ ಉಡುಪಿಯ ಹಲವು ಪಾಲಿಟೆಕ್ನಿಕ್, ತಾಂತ್ರಿಕ ಮತ್ತು ಚಿತ್ರಕಲಾ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಿತು.
ಪಾಲಿಟೆಕ್ನಿಕ್ನ ವಿವಿಧ ತರಗತಿಗಳಿಗೆ ಭೇಟಿ ನೀಡಿದ ತಂಡದ ಸದಸ್ಯರು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ, ಅವರ ಬೇಡಿಕೆ ಬಗ್ಗೆಯೂ ಮಾಹಿತಿ ಕಲೆಹಾಕಿದರು.
ಹಣಕಾಸು, ಆಡಳಿತ ಮತ್ತಿತರ ಅಗತ್ಯ ಬೇಡಿಕೆ ಗಳಬಗ್ಗೆ ಸಂಬಂಧಪಟ್ಟ ಕಾಲೇಜಿನ ಮುಖ್ಯಸ್ಥರಿಂದ ಮಾಹಿತಿ ಪಡೆದರು.
ಇಲಾಖೆಯ ಆಡಳಿತಾಧಿಕಾರಿ ಆರ್.ವೆಂಕಟಸ್ವಾಮಿ, ಸಹಾಯಕ ಆಡಳಿತಾ ಧಿಕಾರಿ ಟಿ.ಟಿ.ಪೂಜಾರಿ ಮತ್ತು ಚಿತ್ರಕಲಾ ಘಟಕದ ಅಧಿಕಾರಿ ಬಿ.ಆರ್.ಬಡಿಗೇರ್ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.