ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುತ್ಪಾದಕ ಉದ್ದೇಶಕ್ಕೆ ಸಾಲ ಬಳಸದಿರಿ

Last Updated 16 ಫೆಬ್ರುವರಿ 2012, 6:10 IST
ಅಕ್ಷರ ಗಾತ್ರ

ಉಡುಪಿ: ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎಚ್.ಯು.ತಳವಾರ್ ಅವರ ಮಾರ್ಗದರ್ಶನದಂತೆ ನೂತನವಾಗಿ ರಚನೆಗೊಂಡಿರುವ ತನಿಖಾ ತಂಡವು ಇಲಾಖೆ ಜಂಟಿ ನಿರ್ದೇಶಕ ಎಸ್. ವಿಜಯಕುಮಾರ್ ಅವರ ನೇತೃತ್ವದಲ್ಲಿ ಮಂಗಳವಾರ ಉಡುಪಿಯ ಹಲವು ಪಾಲಿಟೆಕ್ನಿಕ್, ತಾಂತ್ರಿಕ ಮತ್ತು ಚಿತ್ರಕಲಾ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಿತು.

ಪಾಲಿಟೆಕ್ನಿಕ್‌ನ ವಿವಿಧ ತರಗತಿಗಳಿಗೆ ಭೇಟಿ ನೀಡಿದ ತಂಡದ ಸದಸ್ಯರು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ, ಅವರ ಬೇಡಿಕೆ ಬಗ್ಗೆಯೂ ಮಾಹಿತಿ ಕಲೆಹಾಕಿದರು.

ಹಣಕಾಸು, ಆಡಳಿತ ಮತ್ತಿತರ ಅಗತ್ಯ ಬೇಡಿಕೆ ಗಳಬಗ್ಗೆ ಸಂಬಂಧಪಟ್ಟ ಕಾಲೇಜಿನ ಮುಖ್ಯಸ್ಥರಿಂದ ಮಾಹಿತಿ ಪಡೆದರು.

ಇಲಾಖೆಯ ಆಡಳಿತಾಧಿಕಾರಿ ಆರ್.ವೆಂಕಟಸ್ವಾಮಿ, ಸಹಾಯಕ ಆಡಳಿತಾ ಧಿಕಾರಿ ಟಿ.ಟಿ.ಪೂಜಾರಿ ಮತ್ತು ಚಿತ್ರಕಲಾ ಘಟಕದ ಅಧಿಕಾರಿ ಬಿ.ಆರ್.ಬಡಿಗೇರ್ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT