ನವದೆಹಲಿ (ಐಎಎನ್ಎಸ್): ಲೋಕಸಭಾಧ್ಯಕ್ಷೆ ಮೀರಾ ಕುಮಾರ್ ಅವರ ಒತ್ತಾಸೆಯು ಮಮತಾ ಬ್ಯಾನರ್ಜಿ ಅವರು ಲತಾ ಮಂಗೇಶ್ಕರ್ ಅವರ ಸುಪ್ರಸಿದ್ಧ ಗೀತೆಯನ್ನು ಹಾಡುವಂತೆ ಮಾಡಿತು.
ಸೇನಾಪಡೆಗಳನ್ನು ಉದ್ದೇಶಿಸಿ ಲತಾ ಅವರ ಕಂಠದಿಂದ ಸುಶ್ರಾವ್ಯವಾಗಿ ಹರಿದುಬಂದಿದ್ದ, ಪ್ರಥಮ ಪ್ರಧಾನಿಯ ಕಣ್ಣಲ್ಲಿ ನೀರು ತರಿಸಿದ್ದ ‘ಆ ಮೇರೆ ವತನ್ ಕಿ ಲೋಗೊ’ ಗೀತೆಯನ್ನು ರಕ್ಷಣಾ ಸಿಬ್ಬಂದಿಗೆ ಕೊಡುಗೆಯನ್ನು ಪ್ರಕಟಿಸಿದ ಸಂದರ್ಭದಲ್ಲಿ ಮಮತಾ ಜ್ಞಾಪಿಸಿಕೊಂಡರು.
ಇದರ ಜೊತೆಗೆ ‘ಕೋಯಿ ಸಿಖ್, ಕೋಯಿ ಜಾಟ್, ಮರಾಠ, ಸರ್ಹದ್ ಪೆ ಮರನೇವಾಲ ಹರ್ ವೀರ್ ಥಾ ಭಾರತವಾಸಿ’ (ಗಡಿಯಲ್ಲಿ ಹೋರಾಡಿದ್ದ ಸಿಖ್ಖರು, ಜಾಟರು, ಮರಾಠೀಯರು, ಗೂರ್ಖಾಗಳು, ಮದ್ರಾಸಿಗಳು ಎಲ್ಲರೂ ಭಾರತೀಯರೇ) ಎಂಬುದೂ ಸೇರಿದಂತೆ ಇತರ ಕೆಲವು ದ್ವಿಪದಿಗಳನ್ನೂ ಅವರು ಹೇಳಿದರು.