ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಘಾತ: ರೂ.1.17 ಕೋಟಿ ಪರಿಹಾರ

Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಪಘಾತವೊಂದರಲ್ಲಿ ಮೃತಪಟ್ಟ ಭಾರತೀಯ ತೈಲ ನಿಗಮದ ಉದ್ಯೋಗಿ ಕುಟುಂಬಕ್ಕೆ ಮೋಟಾರು ಅಪಘಾತ ಪರಿಹಾರ ಪ್ರಾಧಿಕಾರ ರೂ. 1.17 ಕೋಟಿ ಪರಿಹಾರ ನೀಡಲು ಸೂಚಿಸಿದೆ.

ಮುಖೇಶ್‌ ಖುರಾನ (46) ಅವರು ಭಾರತೀಯ ತೈಲ ನಿಗಮದಲ್ಲಿ ಮುಖ್ಯ ಯೋಜನಾ ವ್ಯವಸ್ಥಾಪಕರಾಗಿ ಕೆಲಸ ನಿವರ್ಹಿಸುತ್ತಿದ್ದರು.  ಅಪಘಾತ­ಕ್ಕೀಡಾದ ವಾಹನಕ್ಕೆ ವಿಮೆ ಇದ್ದು, ಸೂಕ್ತ ಪರಿಹಾರ ನೀಡುವಂತೆ ನ್ಯಾಷನಲ್‌ ಇನ್ಷೂರೆನ್ಸ್‌ ಕಂಪೆನಿ ಲಿಮಿಟೆಡ್‌ಗೆ ಪ್ರಾಧಿಕಾರ ಸೂಚಿಸಿದೆ.

ಅಪಘಾತಕ್ಕೀಡಾದ ವ್ಯಕ್ತಿಯು ಗಜಿಂದರ್‌ ಸಿಂಗ್‌ ಎಂಬುವವರೊಂದಿಗೆ 2009ರ ಸೆಪ್ಟೆಂಬರ್‌ 10ರಂದು ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ ಘಟನೆ ನಡೆದಿತ್ತು. ಈ ಸಂಬಂಧ ಅಪಘಾತದಲ್ಲಿ ಮೃತಪಟ್ಟ ಮುಖೇಶ್‌ ಖುರಾನ ಕುಟುಂಬವು ಪ್ರಾಧಿಕಾರಕ್ಕೆ ದೂರು ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT