ನವದೆಹಲಿ (ಪಿಟಿಐ): ಅಪಘಾತವೊಂದರಲ್ಲಿ ಮೃತಪಟ್ಟ ಭಾರತೀಯ ತೈಲ ನಿಗಮದ ಉದ್ಯೋಗಿ ಕುಟುಂಬಕ್ಕೆ ಮೋಟಾರು ಅಪಘಾತ ಪರಿಹಾರ ಪ್ರಾಧಿಕಾರ ರೂ. 1.17 ಕೋಟಿ ಪರಿಹಾರ ನೀಡಲು ಸೂಚಿಸಿದೆ.
ಮುಖೇಶ್ ಖುರಾನ (46) ಅವರು ಭಾರತೀಯ ತೈಲ ನಿಗಮದಲ್ಲಿ ಮುಖ್ಯ ಯೋಜನಾ ವ್ಯವಸ್ಥಾಪಕರಾಗಿ ಕೆಲಸ ನಿವರ್ಹಿಸುತ್ತಿದ್ದರು. ಅಪಘಾತಕ್ಕೀಡಾದ ವಾಹನಕ್ಕೆ ವಿಮೆ ಇದ್ದು, ಸೂಕ್ತ ಪರಿಹಾರ ನೀಡುವಂತೆ ನ್ಯಾಷನಲ್ ಇನ್ಷೂರೆನ್ಸ್ ಕಂಪೆನಿ ಲಿಮಿಟೆಡ್ಗೆ ಪ್ರಾಧಿಕಾರ ಸೂಚಿಸಿದೆ.
ಅಪಘಾತಕ್ಕೀಡಾದ ವ್ಯಕ್ತಿಯು ಗಜಿಂದರ್ ಸಿಂಗ್ ಎಂಬುವವರೊಂದಿಗೆ 2009ರ ಸೆಪ್ಟೆಂಬರ್ 10ರಂದು ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ ಘಟನೆ ನಡೆದಿತ್ತು. ಈ ಸಂಬಂಧ ಅಪಘಾತದಲ್ಲಿ ಮೃತಪಟ್ಟ ಮುಖೇಶ್ ಖುರಾನ ಕುಟುಂಬವು ಪ್ರಾಧಿಕಾರಕ್ಕೆ ದೂರು ಸಲ್ಲಿಸಿತ್ತು.