ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ

Last Updated 6 ಫೆಬ್ರುವರಿ 2012, 8:05 IST
ಅಕ್ಷರ ಗಾತ್ರ

ಚಾಮರಾಜನಗರ: ಮಾದಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ರಸ್ತೆ ಕಾಮಗಾರಿಗಳನ್ನು ನಿರ್ವಹಿಸಲು  ಬಿಡುಗಡೆಯಾಗಿರುವ  14.50 ಲಕ್ಷ ರೂ. ವೆಚ್ಚದ ಕಾಮಗಾರಿಗಳಿಗೆ ಜಿ.ಪಂ.ಸದಸ್ಯೆ ನಾಗಶ್ರೀಪ್ರತಾಪ್ ಶನಿವಾರ ಗುದ್ದಲಿಪೂಜೆ ನೆರವೇರಿಸಿದರು.

ತಾಲೂಕಿನ ಮೇಲಾಜಿಪುರದಿಂದ ಬದನಗುಪ್ಪೆ ಮಾರ್ಗದ  ರಸ್ತೆ ಅಭಿವೃದ್ದಿಗೆ 3 ಲಕ್ಷ ರೂ, ಶಿವಪುರ- ಕಾಳನಹುಂಡಿಗೆ ಮಾರ್ಗದ ರಸ್ತೆ ಅಭಿವೃದ್ದಿ 2 ಲಕ್ಷ ರೂ, ಮಸಗಾಪುರ- ಕಾಡಹಳ್ಳಿ ಮಾರ್ಗದ ರಸ್ತೆ ಅಭಿವೃದ್ದಿಗೆ 2 ಲಕ್ಷ ರೂ, ನಂಜೇದೇವನಪುರ- ತಮ್ಮಡಹಳ್ಳಿ ಮಾರ್ಗದ ರಸ್ತೆ ಅಭಿವೃದ್ದಿಗೆ 1 ಲಕ್ಷ ರೂ, ಮಂಗಲ- ಮಂಗಲಹೊಸೂರು ಮಾರ್ಗ ಶಂಕರದೇವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ  ರಸ್ತೆ ಅಭಿವೃದ್ದಿಗೆ 3 ಲಕ್ಷ ರೂ ನೀಡಲಾಗಿದೆ ಎಂದು ತಿಳಿಸಿದರು.

ಕಸ್ತೂರು ಮುಖ್ಯ ರಸ್ತೆಯಿಂದ ಆನಹಳ್ಳಿಯಿಂದ  ಪುಟ್ಟೇಗೌಡನಹುಂಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿಗೆ  2 ಲಕ್ಷ ರೂ, ಮರಿಯಾಲದಿಂದ ಶಿವಪುರಕ್ಕೆ ಸಂಪರ್ಕ ಕಲ್ಪಿಸುವ  ರಸ್ತೆ ಅಭಿವೃದ್ದಿಗೆ 1.50 ಲಕ್ಷ ರೂ.ಗಳನ್ನು ಬಿಡುಗಡೆಯಾಗಿದ್ದು ಸದ್ಯದಲ್ಲಿಯೇ ಕಾಮಗಾರಿ ಆರಂಭವಾಗಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಮೇಲಾಜಿಪುರದ ಮಠದ  ಮಹಂತಾಸ್ವಾಮೀಜಿ, ಗ್ರಾ.ಪಂ.ಅಧ್ಯಕ್ಷ ಅಬ್ದುಲ್‌ಗಫಾರ್, ಮಾಜಿ ಅಧ್ಯಕ್ಷ ಬಸವಣ್ಣ, ಸದಸ್ಯರಾದ ಮಲ್ಲಿಗಮ್ಮ, ರಾಚಶೆಟ್ಟಿ, ಮುಖಂಡರಾದ ಸುಬ್ಬಪ್ಪ, ಶಾಂತಪ್ಪ, ನಾಗಣ್ಣ, ರಾಜೇಂದ್ರ, ಪುಟ್ಟಸ್ವಾಮಪ್ಪ, ಲಿಂಗರಾಜು ಇತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT