ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗೆ ರಾಗಿ ಗಂಜಿ ಆತಿಥ್ಯ

Last Updated 25 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಸರ್ ಸಿ.ವಿ. ರಾಮನ್‌ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೇಮಲತಾ ಸುರೇಶ್‌ರಾಜ್ ಅವರು ಚುನಾವಣೆ ಪ್ರಚಾರಕ್ಕೆ ಮನೆ ಮನೆಗೆ ತೆರಳಿದಾಗ ಅವರಿಗೆ ಜನರಿಂದಲೇ ರಾಗಿ ಗಂಜಿ, ಮಜ್ಜಿಗೆ ಆತಿಥ್ಯ ಕಾದಿತ್ತು.

ಕ್ಷೇತ್ರದ ಕೃಷ್ಣಯ್ಯನಪಾಳ್ಯ ಹಾಗೂ ಎನ್‌ಜಿಇಎಫ್ ಕಾಲೋನಿಗಳಲ್ಲಿ ಹೇಮಲತಾ ತಮ್ಮ ಬೆಂಬಲಿಗರೊಂದಿಗೆ ಮತ ಯಾಚನೆಗೆ ಹೋದಾಗ ಅಭ್ಯರ್ಥಿಗೆ ಮಾತ್ರವಲ್ಲದೆ ಪ್ರಚಾರಕ್ಕೆ ಬಂದಿದ್ದ ಬೆಂಬಲಿಗರಿಗೆಲ್ಲ ರಾಗಿ ಗಂಜಿ, ಮಜ್ಜಿಗೆ ನೀಡಲಾಯಿತು.ಮಧ್ಯಾಹ್ನದ ಉರಿಬಿಸಿಲಲ್ಲಿ ಪ್ರಚಾರಕ್ಕೆ ಬಂದಿದ್ದಾರೆ ಆದ್ದರಿಂದಲೇ  ಮಜ್ಜಿಗೆ ನೀಡಿದೆವು ಎಂದು ಸ್ಥಳೀಯರಾದ ವೀಣಾ ಹಾಗೂ ರತ್ನಮ್ಮ ಹೇಳಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆಡಳಿತದ ಅವಧಿಯಲ್ಲಿ ಜಾರಿಯಾದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿರುವುದಾಗಿ ಹೇಮಲತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT