ಶ್ರೀನಗರ: ಪವಿತ್ರ ಯಾತ್ರಾ ಸ್ಥಳ ಅಮರನಾಥಕ್ಕೆ ಈವರೆಗೆ 1.15 ಲಕ್ಷ ಯಾತ್ರಾರ್ಥಿಗಳು ಭೇಟಿ ನೀಡಿದ್ದು, ಪ್ರಕೃತಿದತ್ತವಾದ ಹಿಮಲಿಂಗದ ದರ್ಶನ ಪಡೆದಿದ್ದಾರೆ. ಯಾತ್ರೆ ವೇಳೆ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ.
ದಕ್ಷಿಣ ಕಾಶ್ಮೀರದ 3,880 ಮೀಟರ್ ಎತ್ತರದ ಹಿಮಾಲಯದಲ್ಲಿ ಪಂಜಾಬ್ನ ಲೂದಿಯಾದ ನಿವಾಸಿ ಸಂತ್ಯೇಂದ್ರ ಸಿಂಗ್(38) ಶನಿವಾರ ಹೃದಯಾಘಾತದಿಂದ ಮೃತಪ್ಟಟಿದ್ದಾರೆ.
55 ದಿನಗಳ ಯಾತ್ರೆ ಜೂನ್ 28ರಿಂದ ಆರಂಭವಾಗಿದ್ದು, ಈವರೆಗೆ 1.15 ಲಕ್ಷ ಯಾತ್ರಿಗಳು `ಶಿವಲಿಂಗಮ್'ನ ದರ್ಶನ ಪಡೆದಿದ್ದಾರೆ.