ನವದೆಹಲಿ, (ಐಎಎನ್ಎಸ್): ವೋಟಿಗಾಗಿ ನೋಟು ಹಗರಣದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ರಾಜ್ಯಸಭಾ ಸದಸ್ಯ ಮುಖಂಡ ಅಮರ್ ಸಿಂಗ್ ಅವರ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆಯನ್ನು ದೆಹಲಿ ಹೈ ಕೋರ್ಟ್ ಅ.18ಕ್ಕೆ ಮುಂದೂಡಿದೆ. ಸಿಂಗ್ ಆರೋಗ್ಯ ಸ್ಥಿತಿ ಕುರಿತಂತೆ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಲ್ಲಿಸಿರುವ ವರದಿ ಅಂಗೀಕರಿಸಿದ ನ್ಯಾಯಾಲಯ, ಅದರ ಪರಿಶೀಲನೆಗೆ ಸಮಯದ ಅಗತ್ಯವಿದೆ ಎಂದು ಹೇಳಿದೆ.