ಇತ್ತೀಚೆಗೆ ಜಮಖಂಡಿಯ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯೊಬ್ಬ ಹಣಕ್ಕಾಗಿ ಎರಡು ಶವಗಳನ್ನು ಶವಾಗಾರದಲ್ಲಿಯೇ ಒತ್ತೆ ಇಟ್ಟುಕೊಂಡು ಹಣಕ್ಕಾಗಿ ಪೀಡಿಸಿದ ಹೃದಯ ವಿದ್ರಾವಕ ಘಟನೆ ಮಾಧ್ಯಮಗಳ ಮೂಲಕ ಜನರ ಗಮನಕ್ಕೆ ಬಂದಿದೆ.
ರಸ್ತೆ ಅಪಘಾತದಲ್ಲಿ ಸತ್ತ ಇಬ್ಬರು ವ್ಯಕ್ತಿಗಳ ಶವ ಪರೀಕ್ಷೆ ಮಾಡಲು ಅವರ ಬಂಧುಗಳಿಂದ ಎರಡು ಸಾವಿರ ರೂ. ಲಂಚ ಕೇಳಿದ್ದು ಅವರು 1600 ರೂಪಾಯಿ ನೀಡಿ ಮಿಕ್ಕ 400 ರೂಪಾಯಿಗಳು ಪಂಚನಾಮೆ ಬಳಿಕ ನೀಡುವುದಾಗಿ ತಿಳಿಸಿದ್ದರು.