ವಾಷಿಂಗ್ಟನ್ ಜ. 20 - ‘ಜಗತ್ತಿನಲ್ಲಿ ಸ್ವಾತಂತ್ರ ಉಳಿಯುವಂತೆ ಹಾಗೂ ಯಶಸ್ವಿಯಾಗುವಂತೆ ಮಾಡಲು ತಮ್ಮ ಆಡಳಿತವು ಎಂತಹ ತ್ಯಾಗವನ್ನಾದರೂ ಮಾಡಲು, ಎಂತಹ ಜವಾಬ್ದಾರಿಯನ್ನಾದರೂ ಹೊರಲು ಎಷ್ಟೇ ಕಷ್ಟವಾದರೂ ಎದುರಿಸಲು ಮಿತ್ರರಿಗೆ ಬೆಂಬಲವೀಯಲು ಅಥವಾ ಯಾವ ಶತ್ರುವನ್ನಾದರೂ ವಿರೋಧಿಸಲು ಸಿದ್ಧ’ ಎಂದು ಕೆನಡಿ ತಿಳಿಸಿದರು.
ರಾಷ್ಟ್ರದ ಅಭಿವೃದ್ಧಿಗೆ ಕೈಗಾರಿಕೆ ಪ್ರಗತಿ ಅಗತ್ಯ
ಬೆಂಗಳೂರು, ಜ. 20 - ‘ಯೋಜನೆ ವಾರ’ ಆಚರಣೆ ಅಂಗವಾಗಿ ಇಂದು ‘ಕೈಗಾರಿಕಾ ದಿನ’ ಆಚರಿಸಲ್ಪಟ್ಟಾಗ ಕಳೆದ ಒಂದು ದಶಕದಲ್ಲಿ ಭಾರತದಲ್ಲಾಗಿರುವ ‘ಹೆಮ್ಮೆಪಡಬಹುದಾದಂತಹ’ ಕೈಗಾರಿಕೆ ಬೆಳೆಯಬೇಕಾದರೆ ಈ ದೇಶದಲ್ಲಿ ಯಂತ್ರನಿರ್ಮಾಣ ಕೈಗಾರಿಕೆ ತೀವ್ರಗತಿಯಲ್ಲಿ ಪ್ರಗತಿಯಾಗಬೇಕಾದ ಅಗತ್ಯವನ್ನು ತಿಳಿಸಲಾಯಿತು.