ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯ ಮತ್ತು ವಕೀಲ ಜಾಫರ್ಯಾಬ್ ಜಿಲಾನಿ ಮಾತನಾಡಿ, ‘ಅನ್ಸಾರಿಯವರ ಮನವಿಯು ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿ ತೆಗೆದುಕೊಂಡ ನಿರ್ಧಾರದಂತೆಯೇ ಇರುತ್ತದೆ’ ಎಂದರು.
ಮಂಡಳಿ ಫೆಬ್ರುವರಿ 27ರಂದು ನವದೆಹಲಿಯಲ್ಲಿ ಕಾರ್ಯಕಾರಿ ಸಭೆ ನಡೆಸಿ, ಪ್ರಕರಣದ ಬಗ್ಗೆ ಚರ್ಚಿಸಲಿದೆ ಎಂದೂ ಅವರು ಹೇಳಿದರು.
ಈಗಾಗಲೇ ಈ ವಿವಾದದಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಮುಸ್ಲಿಮರ ಪರವಾಗಿ ಸುನ್ನಿ ವಕ್ಫ್ ಮಂಡಳಿ, ಹಫೀಜ್ ಸಿದ್ದಿಕಿ, ಮಿರ್ಜಾವುದ್ದೀನ್ ಮತ್ತು ಹಿಂದೂಗಳ ಪರವಾಗಿ ಭಗವಾನ್ ಶ್ರೀ ರಾಮ್ಲಲ್ಲಾ, ನಿರ್ಮೋಹಿ ಅಖಾಡ ಹಾಗೂ ಹಿಂದೂ ಮಹಾಸಭಾ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿವೆ.