ಬೆಂಗಳೂರು: ಬೆಂಗಳೂರು ಸ್ಕೂಲ್ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪೂರ್ವ ಪ್ರಾಥಮಿಕ ಶಿಕ್ಷಕಿಯರ ಸಂವಾದ ಹಾಗೂ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸ್ಪರ್ಧೆಯಲ್ಲಿ ಬಿಜಿಎಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಅಯ್ಯಪ್ಪನ್ ನಾಯರ್ ಮತ್ತು ಡೀನ್ಸ್ ಅಕಾಡೆಮಿಯ ಪ್ರಾಂಶುಪಾಲೆ ಶಾಂತಿ ಮೆನನ್ ಅವರು ಚಾಣಕ್ಯ ಪ್ರಶಸ್ತಿಯನ್ನು ಗೆದ್ದುಕೊಂಡರು.
‘ಸಂವಾದ ಸ್ಪರ್ಧೆಯಲ್ಲಿ ಕರ್ನಾಟಕದ ವಿವಿಧೆಡೆಯ ಹಾಗೂ ದೇಶದ ೩೩ ಶಾಲೆಗಳ ೪೦೦ಕ್ಕೂ ಹೆಚ್ಚು ಪ್ರಾಂಶು ಪಾಲರು ಹಾಗೂ ಶಿಕ್ಷಕರು ಭಾಗವಹಿಸಿದ್ದರು.