ಸಭೆಯ ಮುಕ್ತಾಯ ಹಂತದಲ್ಲಿ ನಾಮ ನಿರ್ದೇಶಿತ ಸದಸ್ಯ ಟಿ. ಅರುಣ್ಕುಮಾರ್ ಅವರು `ಪುರಸಭಾ ಸದಸ್ಯರು ಕ್ರಿಮಿನಲ್ಗಳಾದರೆ ಪಟ್ಟಣದ ಅಭಿವೃದ್ಧಿ ಹೇಗೆ ಸಾಧ್ಯ?~ ಎಂಬ ಹೇಳಿಕೆ ನೀಡಿದರು. ಇದರಿಂದ ಸಿಟ್ಟಿಗೆದ್ದ ಆಡಳಿತ ಪಕ್ಷದ ರೇವಣ್ಣ, ಜಿ.ಟಿ. ಗಣೇಶ್, ಖುಷಿಬಾಬು, ಗಂಗಮ್ಮ ಕೆ.ಎಸ್. ಸಿದ್ದಮ್ಮ, ಲೋಕೇಶ್, ಶಾಂತ್ರಾಜ್ ಸಿದ್ದರಾಮಶೆಟ್ಟಿ ರುಕ್ಮಿಣಿ ಮುಂತಾದ ಸದಸ್ಯರು ಹೇಳಿಕೆ ವಾಪಸ್ ಪಡೆಯಬೇಕು ಎಂದು ಕೂಗಾಡಿದರು.