ಚಿಂತಾಮಣಿಯ ಕೃಷಿ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿರುವ ಹ.ಸೋಮಶೇಖರ ಅವರು ಅರ್ಥಶಾಸ್ತ್ರದ ಕುರಿತ ತಮ್ಮ ಬಿಡಿ ಲೇಖನಗಳ ಮೂಲಕ ಪತ್ರಿಕೆಯ ಓದುಗರಿಗೆ ಪರಿಚಿತರು.
`ಹಿಂದುಳಿದ ವರ್ಗಗಳ ಹೋರಾಟ ಮತ್ತು ತಾತ್ವಿಕ ಚಿಂತನೆ~, `ಲೋಹಿಯಾ~ ಹಾಗೂ `ಅರ್ಥ ಸಂದರ್ಭ~ ಅವರ ಈವರೆಗಿನ ಕೃತಿಗಳು. ಅವರ ಅರ್ಥ ಚಿಂತನೆಯ ಮುಂದುವರಿದ ಕೃತಿ, ಇದೀಗ ಪ್ರಕಟಗೊಂಡಿರುವ `ಅರ್ಥನೀತಿ~.
ಅಧ್ಯಯನದ ಅನುಕೂಲಕ್ಕಾಗಿ ಇಲ್ಲಿನ ಮೂವತ್ತುಮೂರು ಲೇಖನಗಳು ಮೂರು ವಿಭಾಗಗಳಲ್ಲಿ ವಿಂಗಡಣೆಗೊಂಡಿವೆ. ಮೊದಲ ವಿಭಾಗದಲ್ಲಿ ಆಧುನಿಕ ಭಾರತದ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದ ಲೇಖನಗಳಿವೆ. ಎರಡನೇ ಭಾಗದ ಬರಹಗಳು ವಿಶ್ವ ಆರ್ಥಿಕ ನೀತಿ-ಚಟುವಟಿಕೆಗಳಿಗೆ ಮೀಸಲು. ಮೂರನೇ ಭಾಗದ ಲೇಖನಗಳು ಕೇಂದ್ರ ಮತ್ತು ರಾಜ್ಯ ಬಜೆಟ್ಗಳ ಹಿನ್ನೆಲೆಯಲ್ಲಿ ಮೂಡಿಬಂದಿವೆ.
ಸೋಮಶೇಖರ ಅವರ ಬರಹಗಳು ಆಧುನಿಕ ಅರ್ಥ ಪ್ರಪಂಚವನ್ನು ಓದುಗರಿಗೆ ಪರಿಚಯಿಸುವ ಪ್ರಯತ್ನಗಳಾಗಿವೆ. ಈ ನಿಟ್ಟಿನಲ್ಲಿ ಅವರು ಸರಳವಾದ ಭಾಷೆಯನ್ನು ರೂಢಿಸಿಕೊಂಡಿದ್ದು, ಸಾಕಷ್ಟು ಮಾಹಿತಿಯೊಂದಿಗೆ ತಮ್ಮ ವಿಚಾರಗಳನ್ನು ಆಕರ್ಷಕಗೊಳಿಸುವ ಪ್ರಯತ್ನ ನಡೆಸಿದ್ದಾರೆ.
ಅರ್ಥನೀತಿ
ಲೇ: ಡಾ. ಹ. ಸೋಮಶೇಖರ;
ಪು: 140; ಬೆ: ರೂ.140;
ಪ್ರ: ಲೋಹಿಯಾ ಪ್ರಕಾಶನ, `ಕ್ಷಿತಿಜ~, ಕಪ್ಪಗಲ್ಲು ರಸ್ತೆ, ಗಾಂಧಿನಗರ, ಬಳ್ಳಾರಿ- 583 103.