ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳಗಿರಿ ಕಿವಿ ಹಿಂಡಿದ ಕರುಣಾನಿಧಿ

Last Updated 7 ಜನವರಿ 2014, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಪಕ್ಷದ ನಾಯಕತ್ವ­ಕ್ಕಾಗಿ  ಪುತ್ರರಲ್ಲಿ ನಡೆದಿರುವ ಕಚ್ಚಾಟ­ದಿಂದ ಬೇಸತ್ತಿರುವ ಡಿಎಂಕೆ ವರಿಷ್ಠ ಎಂ.ಕೆ. ಕರುಣಾನಿಧಿ ಅವರು ಮಂಗಳ­ವಾರ  ಹಿರಿಯ ಪುತ್ರ ಅಳಗಿರಿ ಅವರಿಗೆ ನಯವಾದ ಎಚ್ಚರಿಕೆ ನೀಡಿದ್ದಾರೆ.

ಮುಂಬರುವ ಲೋಕಸಭಾ ಚುನಾ­ವಣೆ­ಯಲ್ಲಿ ಡಿಎಂಕೆ ಮತ್ತು ಚಿತ್ರನಟ ವಿಜಯ­­ಕಾಂತ್ ನೇತೃತ್ವದ (ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ) ಡಿಎಂಡಿಕೆ ನಡುವಣ ಮೈತ್ರಿ  ಕುರಿತು ಅಳಗಿರಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ‘ಪಕ್ಷದ ನಿರ್ಧಾರವನ್ನು ವಿರೋಧಿ­ಸುವವರು ಯಾರೇ ಆಗಲಿ ಅಂಥವ­ರನ್ನು ಪಕ್ಷದಿಂದ ಉಚ್ಚಾಟಿಸ­ಲಾಗು­ವುದು’ ಎಂದು ಅವರು ತಮ್ಮ ಪುತ್ರನಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

‘ಒಂದೊಮ್ಮೆ ಅಳಗಿರಿ ಮೈತ್ರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರೆ ಅದು ಖಂಡನೀಯ. ಪಕ್ಷದ ಶಿಸ್ತನ್ನು ಉಲ್ಲಂಘಿ­ಸುವವರು ಯಾರೇ ಆಗಿರಲಿ ಅಂಥ­ವರ ವಿರುದ್ಧ ಶಿಸ್ತುಕ್ರಮ ಜರುಗಿ­ಸ­ಲಾಗು­ವುದು. ಪಕ್ಷದ  ಸದಸ್ಯತ್ವ ರದ್ದು­ಗೊಳಿ­ಸ­ಲಾಗುವುದು’ ಎಂದಿದ್ದಾರೆ. ಡಿಎಂಡಿಕೆ ಜತೆ ಮೈತ್ರಿಯನ್ನು ಸ್ಟಾಲಿನ್‌ ಸ್ವಾಗ­ತಿ­ಸಿದರೆ, ಅಳಗಿರಿ ವಿರೋಧಿಸಿದ್ದರು.

ಕರುಣಾನಿಧಿ ಅವರ ಉತ್ತರಾಧಿ­ಕಾರಿ ಯಾರು ಎಂಬ ಬಗ್ಗೆ  ಅವರ ಪುತ್ರ­ರಾದ ಅಳಗಿರಿ ಮತ್ತು ಸ್ಟಾಲಿನ್ ನಡು­ವಿನ ಪೈಪೋಟಿಯೇ ಪಕ್ಷದಲ್ಲಿಯ ಈ ಗೊಂದಲಗಳಿಗೆ ಕಾರಣ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT