ರಾಜ್ಯದಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಗಳು ಸೇರಿದಂತೆ ಹಲವಾರು ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗಳಲ್ಲಿ ಕೇವಲ ಗಾಯನ ವಿಷಯದ ಪದವೀಧರರಿಗೆ ಅವಕಾಶ ನೀಡಲಾಗುತ್ತಿದೆ. ನೂರಾರು ಸಂಖ್ಯೆಯಲ್ಲಿರುವ ತಬಲಾ, ಸಿತಾರ ವಿಷಯಗಳ ಪದವೀಧರರು ಕೂಡ ಗಾಯನದ ಮೂಲತತ್ವಗಳನ್ನು ಬಲ್ಲವರೇ ಆಗಿರುತ್ತಾರೆ. ಇವರು ಶಾಲೆಗಳಲ್ಲಿ ಸಂಗೀತದ ಗಾಯನ- ವಾದನಗಳೆರಡನ್ನೂ ಕಲಿಸಬಲ್ಲವರಾಗಿರುತ್ತಾರೆ.
ಆದ್ದರಿಂದ ಮುಖ್ಯಮಂತ್ರಿಯವರು ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯಗಳ ಮಾದರಿಯಲ್ಲಿ ವಾದ್ಯಸಂಗೀತದ ಪದವೀಧರರಿಗೂ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಅವಕಾಶ ನೀಡಲಿ.