ಚಂಡೀಗಡ (ಐಎಎನ್ಎಸ್): ಲೇಖಕ ಸಲ್ಮಾನ್ ರಶ್ದಿ ಅವರು ಭಾರತಕ್ಕೆ ಬರಲು ಅವಕಾಶ ನೀಡಬೇಕಿತ್ತು ಎಂದು ರಾಜ್ಯ ಸಭೆಯ ಪ್ರತಿಪಕ್ಷದ ನಾಯಕ ಅರುಣ ಜೇಟ್ಲಿ ಮಂಗಳವಾರ ಹೇಳಿದ್ದಾರೆ.
`ವಾಜಪೇಯಿ ಅವರ ಸರ್ಕಾರ ಇದ್ದಾಗ ಅವರು ಭಾರತಕ್ಕೆ ಬಂದಿದ್ದರು. ನಿಸ್ಸಂಶಯವಾಗಿ ಅವರಿಗೆ ಬರಲು ಅವಕಾಶ ನೀಡಬೇಕಿತ್ತು~ ಎಂದು ಅವರು ಹೇಳಿದ್ದಾರೆ.
ಜೀವಕ್ಕೆ ಅಪಾಯ ಇರುವ ಹಿನ್ನೆಲೆಯಲ್ಲಿ ಜೈಪುರ ಸಾಹಿತ್ಯ ಉತ್ಸವಕ್ಕೆ ತಮ್ಮ ಭೇಟಿಯನ್ನು ರಶ್ದಿ ರದ್ದು ಮಾಡಿದ್ದನ್ನು ಉಲ್ಲೇಖಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.