ಧಾರವಾಡ: `ಕಾಂಗ್ರೆಸ್ ಬಂಡವಾಳಗಾರರ ನೆಚ್ಚಿನ ಸೇವಕ ಪಕ್ಷದವಾದರೆ, ಬಿಜೆಪಿ ಕೋಮು ದ್ವೇಷವನ್ನು ಹರಡಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ. ಜೆಡಿಎಸ್ ಕೂಡ ರಾಜ್ಯಮಟ್ಟದ ಬಂಡವಾಳಶಾಹಿ ಪಕ್ಷವಾಗಿದೆ. ಜನರ ಆಶೋತ್ತರಗಳನ್ನು ಈಡೇರಿಸುವ ಬದಲು ಈ ಪಕ್ಷಗಳ ಮುಖಂಡರು ಅವಕಾಶವಾದಿ ರಾಜಕೀಯವನ್ನು ಮಾಡುತ್ತಿದ್ದು, ಇವುಗಳನ್ನು ಜನತೆ ಧಿಕ್ಕರಿಸಬೇಕು' ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿ ಸದಸ್ಯ ಹಾಗೂ ರಾಜ್ಯ ಕಾರ್ಯದರ್ಶಿ ಕೆ.ರಾಧಾಕೃಷ್ಣ ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಎಚ್.ಜಿ.ದೇಸಾಯಿ ಅವರ ಪರ ಬುಧವಾರ ನಗರದಲ್ಲಿ ಏರ್ಪಡಿಸಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
`ನಿರಂತರವಾಗಿ ಬೆಲೆ ಏರಿಕೆ, ನಿರುದ್ಯೋಗ, ಕೈಗಾರಿಕೆ ಸ್ಥಾಪನೆಯ ಹೆಸರಿನಲ್ಲಿ ಭೂಕಬಳಿಕೆ ನಡೆದೇ ಇದ್ದರೂ ಹುಸಿ ಎಡವಾದಿಗಳಾದ ಸಿಪಿಐ, ಸಿಪಿಐ (ಎಂ) ಪಕ್ಷಗಳು ಹೋರಾಟ ನಡೆಸುತ್ತಿಲ್ಲ. ಜಂಟಿಯಾಗಿ ಚುನಾವಣೆ ಎದುರಿಸುವ ಉದ್ದೇಶದಿಂದ ಅವರನ್ನು ಸಂಪರ್ಕಿಸಿರೆ ನಮ್ಮಂದಿಗೆ ಬರಲು ನಿರಾಕರಿಸಿದ ಈ ಪಕ್ಷಗಳ ಮುಖಂಡರು ಲೋಕಸತ್ತಾ ಪಕ್ಷಕ್ಕೆ ತಮ್ಮ ಬೆಂಬಲ ಘೋಷಿಸಿದ್ದಾರೆ.