ರೈತರು ಮಳೆಯಿಲ್ಲದೆ ಬೆಳೆಯಿಲ್ಲದೆ ಹತಾಶರಾಗಿ ಕುಳಿತಿರುವಂತಹ ಸಂದರ್ಭದಲ್ಲಿ ನಾಯಕರೆನಿಸಿಕೊಂಡವರು ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಸರಿಯಲ್ಲ. ಕುಡಿಯುವುದಕ್ಕೆ ನೀರಿಲ್ಲದೆ ಪರದಾಡುವಾಗ ರಾಜ್ಯ ಆಳುವಂತಹವರನ್ನು ಕೇಳುವುದರಲ್ಲಿ ತಪ್ಪೇನಿದೆ.
ಅದಕ್ಕೆ ಪ್ರತಿಕ್ರಿಯೆಯಾಗಿ ಮಹಾ ರಾಷ್ಟ್ರದ ಉಪಮುಖ್ಯಮಂತ್ರಿಗಳು ಹೇಳಿದ ಮಾತು ಇಡೀ ದೇಶದ ಜನತೆಗೆ ಅವಮಾನ ಮಾಡಿದಂತಾಗಿದೆ. ಇಂತ ಮಾತುಗಳಿಗೆ ಕಡಿವಾಣ ಯಾವಾಗ ? -ಮಲ್ಲಮ್ಮ ಯಾಟಗಲ್ ,ದೇವದುರ್ಗ .