ಧಾರವಾಡ: ರಾಷ್ಟ್ರೀಯ ಸೇವಾ ಯೋಜನೆಯ ಮೆಗಾ ಶಿಬಿರವು ಇತ್ತೀಚೆಗೆ ಅಸ್ಸಾಂ ರಾಜ್ಯದ ತೇಜಪುರ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಜರುಗಿತು. ಈ ಶಿಬಿರಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಬೆಳಗಾವಿ ಚನ್ನಮ್ಮ ವಿಶ್ವವಿದ್ಯಾಲಯದಿಂದ 16 ಜನ ಸ್ವಯಂ ಸೇವಕ, ಸೇವಕಿಯರು ಭಾಗವಹಿಸಿದ್ದರು. ಪಿ.ಸಿ.ಜಾಬಿನ್ ವಿಜ್ಞಾನ ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ.ಪಿ.ಪಿ. ಸಮೋರೆಕರ್ ಕರ್ನಾಟಕದ ತಂಡಕ್ಕೆ ಕಾಂಟಿಜೆಂಟ್ ಲೀಡರ್ ಆಗಿ ಆ ತಂಡದೊಂದಿಗೆ ಪ್ರತಿನಿಧಿಸಿದ್ದರು.
28 ರಾಜ್ಯಗಳ ಸ್ವಯಂ ಸೇವಕ, ಸೇವಕಿಯರು ಭಾಗವಹಿಸಿದ್ದರು. ಡಿ 14ರಂದು ತೇಜಪುರ್ ವಿಶ್ವವಿದ್ಯಾಲಯದ ಉಪಕುಲಪತಿ ಎಂ.ಕೆ.ಚೌಧರಿ ಶಿಬಿರವನ್ನು ಉದ್ಘಾಟಿಸಿದರು. ಡಾ.ಬಾಲಾ ಲುಕೇಂದರ್ ಅವರಿಂದ ಸಮೂಹ ಮಾಧ್ಯಮ ಸಂಪರ್ಕ, ಪತ್ರಿಕೋದ್ಯಮಗಳ ಕುರಿತು ಭಾಷಣ, ಮಧ್ಯಾಹ್ನ ಅಮಿಯಾ ದಾಸ್ ಅವರಿಂದ ಆಹಾರ ಭದ್ರತೆ ಹಾಗೂ ಬದಲಾವಣೆಯ ಬೇಸಾಯ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚಿಸಲಾಯಿತು.