ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಥಿರಂದ್ರತೆಯಿಂದ ಬೆನ್ನುಮೂಳೆಗೆ ಅಪಾಯ

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ಟಿಯೋಪೋರೋಸಿಸ್ (ಅಸ್ಥಿರಂದ್ರತೆ) ಒಂದು `ಮೌನ~ ಕಾಯಿಲೆಯಾಗಿದ್ದು, ಇದರಿಂದ ಬೆನ್ನುಮೂಳೆಗೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ~ ಎಂದು ನಗರದ ಜೈನ್ ಆಸ್ಪತ್ರೆಯ ಬೆನ್ನುಮೂಳೆ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಮಹೇಶ ಬಿಜ್ಜಾವರ ಹೇಳಿದರು.

ವಿಶ್ವ ಅಸ್ಥಿರಂದ್ರತೆ ಜಾಗೃತಿ ಸಪ್ತಾಹದ ಹಿನ್ನೆಲೆಯಲ್ಲಿ ಶುಕ್ರವಾರ ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. `ಜಗತ್ತಿನಲ್ಲಿ ಪ್ರತಿ 22 ಸೆಕೆಂಡಿಗೆ ಒಂದರಂತೆ ಬೆನ್ನೆಲುಬು ಮುರಿಯುತ್ತಿದ್ದು, ಶೇ 83ರಷ್ಟು ಬೆನ್ನುಮೂಳೆ ಮುರಿತದ ಪ್ರಕರಣಗಳಿಗೆ ಅಸ್ಥಿರಂದ್ರತೆಯೇ ಕಾರಣವಾಗಿದೆ. 50 ವರ್ಷ ಮೇಲ್ಪಟ್ಟ ಶೇ 20ರಷ್ಟು ಸ್ತ್ರೀಯರು ಮತ್ತು ಶೇ 15ರಷ್ಟು ಪುರುಷರು ಈ ಸಮಸ್ಯೆಯಿಂದ ಬಳಲುತ್ತಿದ್ದರೂ ಅವರಿಗೆ ಅದರ ಪರಿಣಾಮದ ಅರಿವಿಲ್ಲ~ ಎಂದು ವಿವರಿಸಿದರು.

`ಅಸ್ಥಿರಂದ್ರತೆಗೆ ಶಸ್ತ್ರ ಚಿಕಿತ್ಸೆಯೇ ಪರಿಹಾರವಾಗಿದ್ದು, ಬಲೂನ್ ಕೈಫೊಪ್ಲಾಸ್ಟಿ ಮೂಲಕ ಸುರಕ್ಷಿತವಾದ ಚಿಕಿತ್ಸೆ ನೀಡಬಹುದು. ಆದರೆ, ಶಸ್ತ್ರ ಚಿಕಿತ್ಸೆ ಎಂದರೆ ಬಹುತೇಕರಿಗೆ ಅನಗತ್ಯವಾದ ಭಯ ಇದೆ~ ಎಂದು ಅವರು ಹೇಳಿದರು.

`ಎತ್ತರ ಕಡಿಮೆ ಆಗುವುದು, ದಿಢೀರ್ ತೀವ್ರವಾದ ಬೆನ್ನುನೋವು ಉಂಟಾಗುವುದು, ಇಲ್ಲವೇ ಅಸಾಮಾನ್ಯ ರೀತಿಯಲ್ಲಿ ಬೆನ್ನು ಬಾಗುವುದು ಈ ಕಾಯಿಲೆಯ ಪ್ರಮುಖ ಲಕ್ಷಣಗಳಾಗಿವೆ. ಆದರೆ, ಬೆನ್ನುಮೂಳೆಯ ಈ ಸಮಸ್ಯೆಯನ್ನು ಸಾಮಾನ್ಯವಾಗಿ ಬರಿ ನೋವು ಎಂಬ ಭ್ರಮೆಯಲ್ಲಿ ಅಲಕ್ಷಿಸಲಾಗುತ್ತದೆ~ ಎಂದು ವಿಷಾದಿಸಿದರು. `ದೇಶದಲ್ಲಿ 30 ಲಕ್ಷಕ್ಕಿಂತ ಅಧಿಕ ಜನ ಈ ಕಾಯಿಲೆಯಿಂದ ಬಳಲುತ್ತಿರುವ ಅಂದಾಜಿದೆ~ ಎಂದು ತಿಳಿಸಿದರು.

`ಬೆನ್ನುಮುರಿತದ ಚಿಕಿತ್ಸೆಗೆ ಒಂದು ಗಂಟೆಯಷ್ಟು ಸಮಯ ಬೇಕಾಗುತ್ತದೆ. ಅದರ ದೋಷವನ್ನು ಸಣ್ಣ ಛೇದನದಿಂದ ಸರಿಪಡಿಸಲಾಗುತ್ತದೆ. ಅಲ್ಲಿ ಉಂಟಾಗುವ ಕುಳಿಯನ್ನು ಬೋನ್ ಸಿಮೆಂಟ್ ಹಾಕಿ ಭರ್ತಿ ಮಾಡಲಾಗುತ್ತದೆ~ ಎಂದು ಹೇಳಿದರು. `ನೋವನ್ನು ಸಹಿಸುತ್ತಾ ಕೂಡುವ ಬದಲು ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳುವುದು ಹೆಚ್ಚಿನ ಹಾನಿಯನ್ನು ತಪ್ಪಿಸಬಲ್ಲದು~ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT