ಬಾನ್ಸುರಿ ವಾದಕ ಪಂಡಿತ ಹರಿಪ್ರಸಾದ ಚೌರಾಸಿಯಾ ಅವರಿಗೆ ಪ್ರಸಕ್ತ ಸಾಲಿನ ಗುರುರಾವ್ ದೇಶಪಾಂಡೆ ರಾಷ್ಟ್ರೀಯ ಪುರಸ್ಕಾರ ಹಾಗೂ `ಗುರುಗಂಧರ್ವ~ ಬಿರುದು ನೀಡಲಾಯಿತು. ಇತ್ತೀಚೆಗೆ ಐಐಎಸ್ಸಿ ಝಂಖಾನಾ ಸಭಾಂಗಣದಲ್ಲಿ 29ನೇ ಅಹೋರಾತ್ರಿ ಸಂಗೀತ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅತಿಥಿಗಳಾಗಿ ಆಗಮಿಸಿದ್ದ ಇಸ್ಕೋ ಸಂಸ್ಥೆ ಮುಖ್ಯಸ್ಥ ಚಿರುದಾಸ, ಕೆನರಾ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ರಾಮನ್, ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜು ಪ್ರಶಸ್ತಿ ವಿಜೇತ ಚೌರಾಸಿಯಾ ಅವರನ್ನು ಅಭಿನಂದಿಸಿದರು.
ಕಸ್ತೂರಿ ಆಟ್ರಾವಾಲ್ಕರ್ ತಮ್ಮ ಸುಶ್ರಾವ್ಯ ಕಂಠದಿಂದ ರಾಗಬಿಹಾಗ ಹಾಗೂ ನಾಟ್ಯಗೀತಗಳನ್ನು ಪ್ರಸ್ತುತಪಡಿಸಿ ಕೇಳುಗರನ್ನು ಆನಂದಗೊಳಿಸಿದರು. ಚೌರಾಸಿಯಾ ಅವರೂ ತಮ್ಮ ಬಾನ್ಸುರಿವಾದನದಲ್ಲಿ ಕೀರ್ವಾಣಿ ರಾಗ ಹಾಗೂ ಯಮುನ ರಾಗವನ್ನು ನುಡಿಸಿದಾಗ ಕೇಳುಗರಿಗೆ ಕೃಷ್ಣ ವೃಂದಾವನದಲ್ಲಿ ಕುಳಿತ ಅನುಭವವಾಯಿತು.
ಯುವಗಾಯಕರಾದ ಎಸ್. ರಮಣಿ ಕರ್ನಾಟಕಿ ಸಂಗೀತದಲ್ಲಿ ಜನರನ್ನು ರಂಜಿಸಿದರೆ, ಹಿಂದುಸ್ತಾನಿ ಗಾಯಕಿ ಶ್ರುತಿ ಸಾಡೋಲಿಕರ್ ನಾಟ್ಯಸಂಗೀತವನ್ನು ಪ್ರಸ್ತುತಪಡಿಸಿದರು. ರಾಮದೇಶಪಾಂಡೆ ಮಾಲ್ಕೌಂಸ್ ಹಾಗೂ ಲಲಿತಪಂಚಮ ರಾಗಗಳನ್ನು ಹಾಡಿ ಬಳಿಕ ಭಜನೆ ಕಾರ್ಯಕ್ರಮ ನಡೆಸಿದರು.