ರಾಜ್ಯಪಾಲ ಇ.ಎಸ್.ಎಲ್ ನರಸಿಂಹನ್ ಅವರು, ಜಂಟಿ ಸಮಾವೇಶವನ್ನು ಉದ್ದೇಶಿಸಿದ ತಮ್ಮ ಭಾಷಣ ಆರಂಭಿಸುತ್ತಿದ್ದಂತೆ ಪ್ರಮುಖ ವಿರೋಧ ಪಕ್ಷ ಟಿಆರ್ ಎಸ್ ನ ಸದಸ್ಯರು ಗದ್ದಲವೆಬ್ಬಿಸಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಮಾಡಿದ ಪ್ರಸಂಗ ನಡೆಯಿತು.
ರಾಜ್ಯಪಾಲರು ತಮ್ಮ ಭಾಷಣ ಆರಂಭಿಸುತ್ತಿದ್ದಂತೆ ಟಿಆರ್ ಎಸ್ ( ತೆಲಂಗಾಣ ರಾಷ್ಟ್ರ ಸಮಿತಿ) ಸದಸ್ಯರು ತಮ್ಮಲ್ಲಿದ್ದ ಅವರ ಭಾಷಣದ ಪ್ರತಿಗಳನ್ನು ಹರಿದು, ಅದರ ತುಂಡುಗಳನ್ನು ಸದನದನದಲ್ಲಿ ಎಸೆದು, ಪ್ರತಿಭಟನೆ ನಡೆಸಿದರು.