ನವದೆಹಲಿ (ಪಿಟಿಐ): ಆತ್ಮಹತ್ಯೆ ಯತ್ನವನ್ನು ಶಿಕ್ಷಾರ್ಹ ಅಪರಾಧದ ವ್ಯಾಪ್ತಿಯಿಂದ ತೆಗೆದುಹಾಕಲು ಚಿಂತನೆ ನಡೆಸಿರುವುದಾಗಿ ಕೇಂದ್ರ ಸರ್ಕಾರ ಗುರುವಾರ ದೆಹಲಿ ಹೈಕೋರ್ಟ್ಗೆ ತಿಳಿಸಿದೆ.
ಈಗಾಗಲೇ ದೇಶದ 29 ರಾಜ್ಯಗಳ ಪೈಕಿ 25 ರಾಜ್ಯಗಳು ಈ ನಿಲುವಿಗೆ ಬೆಂಬಲ ಸೂಚಿಸಿವೆ. ಆತ್ಮಹತ್ಯೆ ಯತ್ನವನ್ನು ಅಪರಾಧ ಎಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 309ನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಹಾಗೂ ನ್ಯಾಯಮೂರ್ತಿ ಸಂಜೀವ್ ಖನ್ನ ಅವರಿದ್ದ ಪೀಠ ಮಾನ್ಯ ಮಾಡಿದೆ.