ಯಾದಗಿರಿ: ಇಲ್ಲಿಯ ಗ್ರಾಮದ ಉರ್ದು ಶಾಲೆ ಪಕ್ಕದ ಕೋಣೆಯಲ್ಲಿ ಈಚೆಗೆ ಆಧಾರ್ ಕೇಂದ್ರಕ್ಕೆ ಚಾಲನೆ ದೊರೆಯಿತು. ಕಳೆದ ಎರಡು ದಿನಗಳಿಂದ ಆಧಾರ್ ಕೇಂದ್ರದ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಬರದೆ ಇರುವುದರಿಂದ ಗ್ರಾಮಸ್ಥರು ಪರದಾಡುತ್ತಿದ್ದಾರೆ.
ಕೇಂದ್ರದ ಮುಂದೆ ಬೆಳಗ್ಗಿನಿಂದ ಸಾಯಂಕಾಲದವರೆಗೆ ಸಾಲು ನಿಂತರೂ, ಕೇಂದ್ರದ ಸಿಬ್ಬಂದಿ ಮನಬಂದಂತೆ ಬರುತ್ತಾರೆ ಎಂಬುದು ಜನರ ಆರೋಪ. ಮಂಗಳವಾರ ಆಧಾರ್ ಕೇಂದ್ರ ಸಂಪೂರ್ಣ ಬಾಗಿಲು ಮುಚ್ಚಿದ್ದರಿಂದ ಕೇಂದ್ರಕ್ಕೆ ಬೆಳಗಿನಿಂದ ಸಾಯಂಕಾಲದವರೆಗೆ ಜನರು ಬಂದು ವಾಪಾಸ್ಸಾಗುವ ದಶ್ಯ ಸಾಮಾನ್ಯ ವಾಗಿತ್ತು ಅಲ್ಲದೆ, ಸಿಬ್ಬಂದಿ ಮೇಲೆ ಹಿಡಿಶಾಪ ಹಾಕಿದರು.
ಜನರು ಆಧಾರ್ ಕೇಂದ್ರದಲ್ಲಿ ನೋಂದಾಯಿಸಲು ಕೃಷಿ ಕೂಲಿ ಕಾರ್ಮಿಕರು ದಿನದ ಕೆಲಸ ಕಾರ್ಯಗಳನ್ನು ಬಿಟ್ಟು, ಅತ್ತ ಕೂಲಿ ಹಣ ಹಾಳು, ಇತ್ತ ಕೇಂದ್ರದ ಮುಂದೆ ನಿಂತರೂ ಕೇಂದ್ರದ ಬಾಗಿಲು ತೆರೆದಿರುವುದಿಲ್ಲಾ ಎಂದು ಸಾರ್ವಜನಿಕರು ದೂರಿದ್ದಾರೆ. ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸಂಬಂಧಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು ಉತ್ತರಿಸುವವರೇ ಎಂದು ಅವರು ಪ್ರಶ್ನಿಸಿದರು.