ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷೆ ಯೋಜನೆಯಾದ `ರಾಷ್ರೀಯ ಆಧಾರ್ ಗುರುತಿನ ಚೀಟಿ~ ವಿತರಣೆ ಕಾರ್ಯಕ್ರಮ ಅನೇಕ ಗೊಂದಲಗಳ ನಡುವೆಯು ಚಾಲ್ತಿಯಲ್ಲಿದೆ.
ಅದರೆ ನೆಲಮಂಗಲದಲ್ಲಿ ಈ ಕಾರ್ಯಕ್ರಮ ಭ್ರಷ್ಟಾಚಾರಕ್ಕೆ ಎಡೆಕೊಟ್ಟಿರುವುದು ದುರಂತ. ಇಲ್ಲಿನ `ರಾಷ್ರೀಯ ಆಧಾರ್ ಗುರುತಿನ ಚೀಟಿ~ ವಿತರಣಾ ಏಜೆನ್ಸಿಯವರು ದಿನ ಒಂದಕ್ಕೆ 50 ಮುಂಗಡ ಟೋಕನ್ ನೀಡುವ ವವಸ್ಥೆ ಮಾಡಿಕೊಂಡು ಮುಂದಿನ ಮೂರು ನಾಲ್ಕು ತಿಂಗಳುಗಳ ನಂತರದ ದಿನಾಂಕ ನೀಡಿ ಕಳುಹಿಸುತ್ತಿದ್ದಾರೆ.