ಸಾಂಪ್ರದಾಯಿಕ ಡೊಳ್ಳು, ನಂದಿಕೋಲು, ಮರಗಾಲು ಕುಣಿತ, ಹಲಗೆ, ಹಗಲು ವೇಷ, ಗುಜರಾತಿ ಸಾಂಪ್ರದಾಯಿಕ ಮೇಳಗಳು ಮೆರವಣಿಗೆ ಉದ್ದಕ್ಕೂ ಗಮನ ಸೆಳೆಯಿತು. ಕೇರಳದ ವಾದ್ಯದೊಂದಿಗೆ ಪಾಲ್ಗೊಂಡ ಕಲಾತಂಡ ಹಾಗೂ ಸಚಿವರ ತಂದೆ ಪೃಥ್ವಿರಾಜ್ ಸಿಂಗ್ ಸಹ ನೃತ್ಯಮಾಡುವ ಮೂಲಕ ಗಮನ ಸೆಳೆದರು. ನಗರದ ಪ್ರಮುಖ ರಸ್ತೆಯಲ್ಲಿ ಸಾಗಿಬಂದ ಮೇರವಣಿಗೆ ಸಂಜೆ 6-00ಕ್ಕೆ ಬಿಜೆಪಿ ಕಚೇರಿ ಸೇರಿತು. ರಸ್ತೆ ಉದ್ದಕ್ಕೂ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಿಂಗ್ ಅವರ ಅಭಿಮಾನಿಗಳು ಸಂಭ್ರಮಿಸಿದರು.