ಆಲೂರು: ಕಾಡಾನೆ ದಾಳಿಗೆ ತಾಲ್ಲೂಕಿನ ಕೆ.ಹೊಸಕೋಟೆ ಹೋಬಳಿಯ ಪುರಬೈರವನಹಳ್ಳಿಯ ಸರೋಜಮ್ಮ (54) ಮೃತಪಟ್ಟ ಘಟನೆ ಗುರುವಾರ ನಸುಕಿನಲ್ಲಿ ನಡೆದಿದೆ.
ಸರೋಜಮ್ಮ ಬೆಳಿಗ್ಗೆ ಬಹಿರ್ದೆಸೆಗೆಂದು ಹಿತ್ತಲಿಗೆ ಹೋಗುತ್ತಿದ್ದಾಗ ತೋಟದಲ್ಲಿದ್ದ ಆನೆ ಬೆನ್ನಟ್ಟಿ ಬಂದಿದೆ. ಮನೆಯ ಸಮೀಪ ದ ಮೋರಿ ಬಳಿ ಸರೋಜಮ್ಮ ಎಡವಿ ಬಿದ್ದಿದ್ದಾರೆ. ಆನೆ ಅಲ್ಲಿಯೇ ಕಾಲಿನಿಂದ ಹೊಸಕಿ ಅವರನ್ನು ಸಾಯಿಸಿದೆ.
ಘಟನೆ ಬೆಳಿಗ್ಗೆ ನಡೆದಿದ್ದರೂ ಮಧ್ಯಾಹ್ನ 2 ಗಂಟೆಯಾದರೂ ಸ್ಥಳಕ್ಕೆ ಅಧಿಕಾರಿಗಳು ಬಾರದಿರುವುದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.