ವಾಷಿಂಗ್ಟನ್ (ಪಿಟಿಐ):`ಆಫ್ಘಾನಿಸ್ತಾನದಿಂದ ಅಮೆರಿಕ ನೇತೃತ್ವದ ಅಂತರರಾಷ್ಟ್ರೀಯ ಪಡೆಗಳು ವಾಪಸ್ ತೆರಳಿದ ಬಳಿಕ ಮತ್ತೆ ಅಧಿಕಾರ ಕಬಳಿಸಲು ಮುಸ್ಲಿಂ ಮೂಲಭೂತವಾದಿಗಳು ಯತ್ನ ನಡೆಸಬಹುದು~ ಎಂದು ಭಾರತ ಆತಂಕ ವ್ಯಕ್ತಪಡಿಸಿದೆ.
ವಾಷಿಂಗ್ಟನ್ ಮೂಲದ ಅಟ್ಲಾಂಟಿಕ್ ಪರಿಷತ್ನ ಆಯ್ದ ಗುಂಪಿನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಮೆರಿಕದ ಭಾರತ ರಾಯಭಾರಿ ನಿರುಪಮಾ ರಾವ್, `ಆಫ್ಘಾನಿಸ್ತಾನದ ವಿಷಯದಲ್ಲಿ ಭಾರತ -ಅಮೆರಿಕ ಮಧ್ಯೆ ಉನ್ನತ ಸಮನ್ವಯ ಅಗತ್ಯ~ ಎಂದಿದ್ದಾರೆ.