ವಿಶ್ವಸಂಸ್ಥೆ (ಐಎಎನ್ಎಸ್): ಆಫ್ರಿಕಾ ಬಿಕ್ಕಟನ್ನು ಬಗೆಹರಿಸಲು ವಿಶ್ವಸಂಸ್ಥೆ ಹೆಚ್ಚಾಗಿ ಆಫ್ರಿಕಾ ಒಕ್ಕೂಟದ ಪರಿಣಾಮಕಾರಿ ಪಾಲುದಾರನಾಗಬೇಕೆಂಬ ಬಯಕೆಯನ್ನು ಭಾರತ ಬುಧವಾರ ಇಲ್ಲಿ ವ್ಯಕ್ತಪಡಿಸಿದೆ.
ಪಶ್ಚಿಮ ಆಫ್ರಿಕಾ ಮತ್ತು ಸಹೇಲ್ ಪ್ರಾಂತ್ಯದಲ್ಲಿ ಶಾಂತಿ, ಭದ್ರತೆ ಹಾಗೂ ಸ್ಥಿರತೆಯ ಮೇಲೆ ಗಡಿಯಾಚೆಗಿನ ಸಂಘಟಿತ ಅಪರಾಧಗಳ ಪರಿಣಾಮ ಕುರಿತು ಭದ್ರತಾ ಮಂಡಳಿ ಏರ್ಪಡಿಸಿದ್ದ ಮುಕ್ತ ಚರ್ಚಾ ಸಭೆಯಲ್ಲಿ ಭಾಗವಹಿಸಿ ಭಾರತದ ಕಾಯಂ ಪ್ರತಿನಿಧಿ ಹರ್ದೀಪ್ ಸಿಂಗ್ ಪುರಿ ಮಾತನಾಡಿದರು.