ಇದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ ತರಬೇತಿ ಪಡೆದ ಪದ್ಧತಿಯಲ್ಲೇ ವೈದ್ಯಕೀಯ ಸೇವೆ ನೀಡಬೇಕೆಂದು ಆದೇಶ ಮಾಡಿದೆ. ಆದರೂ ಆಯುಷ್ ವೈದ್ಯರು ತಮ್ಮ ಪದ್ಧತಿಯನ್ನು ಒಳಗೊಂಡಂತೆ ಅಲೋಪತಿ ಅಭ್ಯಾಸಕ್ಕೆ ಅವಕಾಶ ಕೋರಿ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ಆರೋಪಿಸಿದರು.
ಆಯುಷ್ ವೈದ್ಯರ ಬೇಡಿಕೆಗಳಿಗೆ ಸರ್ಕಾರ ಮನ್ನಣೆಯನ್ನು ಯಾವುದೇ ಕಾರಣಕ್ಕೂ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಡಾ. ಎಸ್.ಬಿ.ಲಕ್ಕೋಳ, ಡಾ.ಧನ್ನೂರ, ಡಾ. ಎಲ್.ಆರ್. ರಡ್ಡೇರ, ಡಾ.ಎಂ.ಐ. ಬಾಕಳೆ ಮತ್ತಿತರರು ಹಾಜರಿದ್ದರು.
ಪದಾಧಿಕಾರಿಗಳ ಆಯ್ಕೆ
ರೋಣ: ಭಾರತೀಯ ವೈದ್ಯಕೀಯ ಸಂಘ ರೋಣ ತಾಲ್ಲೂಕ ಘಟಕದ ನೂತನ ಅಧ್ಯಕ್ಷರಾಗಿ ನರೇಗಲ್ಲದ ವೈದ್ಯ ಡಾ. ಜಿ.ಕೆ.ಕಾಳೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗಜೇಂದ್ರಗಡದ ಡಾ. ಸಿ.ವಿ. ಮಾಳಗಿ, ಕಾರ್ಯದರ್ಶಿಯಾಗಿ ಡಾ.ಐ.ಡಿ.ಬಾಕಳೆ, ಖಜಾಂಚಿಯಾಗಿ ಡಾ. ಡ್ಯಾನಿಯಲ್ ಪೇಡ್ರಿಕ್ಸ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.