ರಾಜ್ಯ ಘಟಕದ ಸಂಸ್ಥಾಪಕ ಅಧ್ಯಕ್ಷ ಬಿ.ಆರ್. ಭಾಸ್ಕರ್ ಪ್ರಸಾದ್ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ಶೋಷಿತ ವರ್ಗಕ್ಕೆ ಅನುಕೂಲವಾಗುವಂತೆ ಸಂವಿಧಾನದಲ್ಲಿ ನೀತಿಗಳನ್ನು ರಚಿಸಿದ್ದಾರೆ. ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದರೂ, ಶೋಷಿತರಿಗೆ ಹಾಗೂ ದಲಿತರಿಗೆ ನ್ಯಾಯ ಸಿಕ್ಕಿಲ್ಲ. ದಲಿತರ ಸೌಲಭ್ಯಗಳನ್ನು ಇತರೆ ಜಾತಿಯವರು ಪಡೆಯುತ್ತಿದ್ದಾರೆ. ನ್ಯಾ.ಎ.ಜೆ. ಸದಾಶಿವ ಅವರು ಈ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡಿ ವರದಿಯನ್ನು ನೀಡಿದ್ದಾರೆ. ಸರ್ಕಾರ ಈ ವರದಿಯನ್ನು ಯಥಾವತ್ತಾಗಿ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಹರಿಹರದಿಂದ ಪ್ರಾರಂಭಗೊಳ್ಳುವ ಪಾದಯಾತ್ರೆ ದಾವಣಗೆರೆ, ಆನಗೋಡು, ಭರಮಸಾಗರ, ಚಿತ್ರದುರ್ಗ, ಹಿರಿಯೂರು, ಶಿರ, ಕಳ್ಳಬಳ್ಳ, ತುಮಕೂರು, ದಾಬಸ್ಪೇಟೆ, ನೆಲಮಂಗಲ, ಯಶವಂತಪುರ, ಪ್ರೀಡಂ ಪಾರ್ಕ್ ಮೂಲಕ ಮುಖ್ಯಮಂತ್ರಿ ಗೃಹ ಕಚೇರಿಗೆ ತಲುಪಿ ಮನವಿ ಸಲ್ಲಿಸಲಿದೆ ಎಂದರು.
ಜಿ.ಒ. ಮೂರ್ತಿ, ಸಿ.ಸಿ. ಬಸವರಾಜಪ್ಪ, ಮುನಿರತ್ನ, ನಾರಾಯಣಸ್ವಾಮಿ, ಪರಮೇಶ್ವರಪ್ಪ, ಹನುಮಂತಪ್ಪ ಪೂಜಾರ್, ವಿ. ಮಂಜುನಾಥ, ಕೆ.ವಿ. ಗಂಗರಾಜ್, ಅನಿಲ್ಕುಮಾರ್, ನಾಗರಾಜ್ ಉಪಸ್ಥಿತರಿದ್ದರು.